Advertisement

ಕಾರ್ಯದರ್ಶಿ ನೇಮಿಸುವಂತೆ ಸದಸ್ಯರ ಆಗ್ರಹ

01:56 PM Sep 23, 2018 | |

ಬೆಳಂದೂರು: ಗ್ರಾ.ಪಂ.ನಲ್ಲಿದ್ದ ಕಾರ್ಯದರ್ಶಿಯನ್ನು ಬೇರೆ ಗ್ರಾ.ಪಂ.ಗೆ ನಿಯೋಜನೆಗೊಳಿಸಲಾಗಿದೆ. ಇದರಿಂದ ತೆರವಾಗಿರುವ ಸ್ಥಾನಕ್ಕೆ ತತ್‌ಕ್ಷಣ ನೇಮಕಾತಿ ನಡೆಯುವಂತೆ ಬೆಳಂದೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

Advertisement

ಸಭೆಯು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಉಮೇಶ್ವರಿ ಅಗಳಿ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಸ್ತಾವಿಸಿದ ಸದಸ್ಯರು, ಈ ಹಿಂದೆ ಕಾರ್ಯದರ್ಶಿಯಾಗಿದ್ದ ಜಯಪ್ರಕಾಶ್‌ ಅವರನ್ನು ಬೇರೆ ಪಂಚಾಯತ್‌ಗೆ ನಿಯೋಜನೆ ಮಾಡಿದ್ದು, ಆದರೆ ತೆರವಾದ ಸ್ಥಾನಕ್ಕೆ ನೇಮಕ ಮಾಡಿಲ್ಲ. ಇದರಿಂದಾಗಿ ಕಾರ್ಯದರ್ಶಿಯನ್ನು ಕೂಡಲೇ ನೇಮಿಸಲು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.

ವಿವಿಧ ಇಲಾಖೆಗಳಿಂದ ಹಾಗೂ ಸರಕಾರದ ಸುತ್ತೋಲೆಗಳ ಮಾಹಿತಿಯನ್ನು ಸಭೆಯ ಹಾಗೂ ಎಲ್ಲ ಸದಸ್ಯರ ಗಮನಕ್ಕೆ ತರುವಂತೆ ಅಧ್ಯಕ್ಷೆ ಉಮೇಶ್ವರಿ ಅಗಳಿ ಸಿಬಂದಿಯಲ್ಲಿ ಸೂಚಿಸಿದರು.

ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಹರೀಶ್‌ ಕೆರೆನಾರು, ಸದಸ್ಯರಾದ ಜಯಂತ ಅಭೀರ, ವಿಟ್ಠಲ ಗೌಡ ಅಗಳಿ, ಮೋಹನ್‌ ಅಗಳಿ, ನಝೀರ್‌ ದೇವಸ್ಯ, ಪಾರ್ವತಿ ದಾಮೋದರ ಬೊಮ್ಮೋಡಿ, ಮೇದಪ್ಪ ಕೆಡೆಂಜಿ, ತೇಜಾಕ್ಷಿ ಕೊಡಂಗೆ, ಗೌರಿ ಸಂಜೀವ ಕಲಾಪದಲ್ಲಿ ಭಾಗವಹಿಸಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನವೀನ್‌ ಸ್ವಾಗತಿಸಿ, ವರದಿ ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next