Advertisement

ರಾ.ಹೆದ್ದಾರಿಯ ರಸ್ತೆ ಹೊಂಡ ಮುಚ್ಚಿ ಮಾನವೀಯತೆ ಮೆರೆದ ಅರಬ್‌ ರೈಡರ್ಸ್‌ ಕ್ಲಬ್‌ ಸದಸ್ಯರು

08:54 PM Jul 22, 2019 | Team Udayavani |

ಕಾಸರಗೋಡು: ಕಾಸರಗೋಡು-ಮಂಗಳೂರು ರಾ.ಹೆದ್ದಾರಿಯ ತಲಪಾಡಿ ಮೋಟೆಲ್‌ ಆರಾಮ್‌ ಮುಂಭಾ ಗದಲ್ಲಿರುವ ರಾ.ಹೆದ್ದಾರಿಯಲ್ಲಿ ಸೃಷ್ಟಿಯಾಗಿದ್ದ ಬೃಹತ್‌ ಗಾತ್ರದ ಹೊಂಡಗಳಿಗೆ ಟಿಪ್ಪರ್‌ ಲಾರಿಗಳಲ್ಲಿ ಕಲ್ಲುಗಳನ್ನು ತಂದು ಹಾಕಿ ಅದನ್ನು ಜೆಸಿಬಿಯಲ್ಲಿ ಸರಿಪಡಿಸಿ ಶ್ರಮದಾನದ ಮೂಲಕ ತೂಮಿನಾಡು ಅರಬ್‌ ರೈಡರ್ಸ್‌ ಕ್ಲಬ್‌ನ ಸದಸ್ಯರು ಹೊಂಡಗಳನ್ನು ತುಂಬಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟು ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ. ರವಿವಾರ ಬೆಳಗ್ಗಿನಿಂದ ಸಂಜೆ ತನಕ ಬಿಡುವಿಲ್ಲದೆ ಶ್ರಮದಾನ ನಡೆಸಿದರು.

Advertisement

ಈ ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡಗಳು ಸೃಷ್ಟಿಯಾಗಿ ವಾಹನ ಸಂಚಾರಕ್ಕೂ ಅಡಚಣೆ ಯಾಗುವುದರ ಜೊತೆ ಯಾಗಿ ಅಪಘಾತಗಳಿಗೂ ಕಾರಣ ವಾಗುತಿತ್ತು. ಕಣ್ಣಿದ್ದೂ ಕಂಡೂ ಕಾಣದ ಜಾಣ ಕುರುಡರಂತೆ ವರ್ತಿಸುತಿದ್ದ ಜನ ಪ್ರತಿನಿ ಧಿಗಳಿಗೆ ಸಡುª ಹೊಡೆಯುವ ರೀತಿಯಲ್ಲಿ ಅರಬ್‌ ರೈಡರ್ಸ್‌ ಸದಸ್ಯರ ಶ್ರಮದಾನ ಎಲ್ಲರ ಮೆಚ್ಚುಗಗೆ ಪಾತ್ರವಾಯಿತು.ಕೇಂದ್ರ ಸರಕಾರದ ಮಹತ್ವದ ಯೋಜನೆ ಯಾಗಿರುವ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ಬಹುತೇಕ ರಾಜ್ಯಗಳಲ್ಲಿ ಪೂರ್ಣಗೊಂಡಿದೆ.

ಕರ್ನಾಟಕದಲ್ಲೂ ಬಹುತೇಕ ಪೂರ್ಣ ಗೊಂಡಿದೆ. ಆದರೆ ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಇನ್ನೂ ಚಾಲನೆ ಲಭಿಸಿಲ್ಲ. ಈ ಬಗ್ಗೆ ಹೆಚ್ಚಿನ ಪ್ರಕ್ರಿಯೆಯೂ ನಡೆದಿಲ್ಲ. ಶೀಘ್ರವೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಲಾಗುವುದೆಂದು ಕೇರಳ ರಾಜ್ಯ ಸರಕಾರ ಹಲವು ಬಾರಿ ಘೋಷಣೆ ಮಾಡಿದ್ದರೂ, ಇನ್ನೂ ಕೂಡ ಕಾಮಗಾರಿ ಆರಂಭಗೊಂಡಿಲ್ಲ. ಹೆಚ್ಚೇಕೆ ಪ್ರಾಥಮಿಕ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

ತಲಪಾಡಿ ಪ್ರವೇಶಿಸುವಾಗಲೇ ಕರ್ನಾಟಕ ಮತ್ತು ಕೇರಳದ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಇರುವ ಗುಣಮಟ್ಟದ ಅಂತರವನ್ನು ಸೂಚಿಸುತ್ತದೆ. ತಲಪಾಡಿಯಿಂದ ಮಂಗಳೂರಿನ ವರೆಗೆ ಚತುಷ್ಪಥ ರಸ್ತೆ ಪೂರ್ಣಗೊಂಡು ವರ್ಷಗಳೇ ಸಂದರೂ, ಕೇರಳದ ತಲಪಾಡಿಯ ದಕ್ಷಿಣಕ್ಕೆ ರಾ.ಹೆದ್ದಾರಿಯ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ಅಗಲ ಕಿರಿದಾದ ರಸ್ತೆ, ಜತೆಯಲ್ಲಿ ರಸ್ತೆಯ ಅಲ್ಲಲ್ಲಿ ಹೊಂಡಗುಂಡಿಗಳು ಎದುರಾಗುತ್ತವೆ. ತಲಪಾಡಿಯಲ್ಲಂತೂ ಬೃಹತ್‌ ಗಾತ್ರದ ಹೊಂಡ ಬಿದ್ದು ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿ ನಿಂತಿತ್ತು.

ಇಂತಹ ಪರಿಸ್ಥಿತಿ ಕಾಸರಗೋಡು ಜಿಲ್ಲೆಯ ಹಲವೆಡೆ ಇದೆ. ಈ ಬಗ್ಗೆ ಯಾರೂ ತಲೆಕೆಡಿಸಿ ಕೊಂಡಂತಿಲ್ಲ. ಇದೇ ರೀತಿಯಲ್ಲಿ ಕಾಸರಗೋಡು ಜಿಲ್ಲೆಯ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳು ಇದೇ ಪರಿಸ್ಥಿತಿಗೆ ಬಂದಿದೆ. ರಸ್ತೆಯಲ್ಲಿ ಸೃಷ್ಟಿrಯಾಗಿರುವ ಭೀಮ ಗಾತ್ರದ ಹೊಂಡ ಅಪಾಯವನ್ನು ಕೈಬೀಸಿ ಕರೆಯುತ್ತಿದೆ.

Advertisement

ಸಂಭವನೀಯ ದುರಂತವನ್ನು ತಪ್ಪಿಸಲು ಸಂಬಂಧಪಟ್ಟವರು ಶೀಘ್ರವೇ ರಸ್ತೆ ದುರಸ್ತಿಗೆ ಮುಂದಾಗಬೇಕಾಗಿದೆ. ರಸ್ತೆಯ ಹೊಂಡ ಮುಚ್ಚಿ ಹೊಂಡಕ್ಕೆ ಬೀಳುವ ವಾಹನಗಳನ್ನು ರಕ್ಷಿಸಬೇಕಾಗಿದೆ.

ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸ ಬೇಕಾಗಿದೆ. ಕ್ಲಬ್‌ ಅಧ್ಯಕ್ಷ ಯಾಹ್ಯಾ, ಕಾರ್ಯದರ್ಶಿ ಸಿದ್ದಿಕ್‌ ತಂಙಲ್‌, ಕೋಶಾ ಧಿಕಾರಿ ಅಶ್ರಫ್‌ ಸಕ್ಲಿನ್‌, ಕೊಲ್ಲಿ ರಾಷ್ಟ್ರದ ಪ್ರತಿನಿ ಧಿಗಳಾದ ಇಸ್ಮಾಯಿಲ್‌ ಎಂ.ಪಿ, ಅಬ್ದುಲ್‌ ಲತೀಫ್‌ ಬಾಬಾ, ಅಬ್ದುಲ್‌ ಸತ್ತಾರ್‌, ಮುನೀರ್‌ ತೂಮಿನಾಡು, ಅಶ್ರಫ್‌ ಕೋಯಿನ್ನೂರು, ತಮ್ಮಿ, ಸಮೀರ್‌, ತೌಶೀಫ್‌, ಅಲ್‌ ಫರಾಝ್, ತಂಚಿ ಸೇರಿದಂತೆ ತೂಮಿನಾಡಿನ ಹಲವಾರು ಮಂದಿ ಯುವಕರು ಕೈ ಜೋಡಿಸಿದರು.

“ಉದಯವಾಣಿ’ ವರದಿಗೆ ಸ್ಪಂದನ
“ಕೇರಳಕ್ಕೆ ಸ್ವಾಗತಿಸುವ ಹದಗೆಟ್ಟ ರಸ್ತೆ-ತಲಪಾಡಿ ದಾಟಿದರೆ ಅಪಾಯಕಾರಿ ಹೊಂಡಗುಂಡಿ ರಸ್ತೆ’ ಎಂಬ ತಲೆಬರಹದಲ್ಲಿ ಜು.13 ರಂದು “ಉದಯವಾಣಿ’ ವರದಿ ಮಾಡಿತ್ತು. ಈ ವರದಿಗೆ ಸ್ಪಂದಿಸಿದ ಅರಬ್‌ ರೈಡರ್ಸ್‌ ಕ್ಲಬ್‌ ಸದಸ್ಯರು ಶ್ರಮದಾನದ ಮೂಲಕ ರಸ್ತೆ ಹೊಂಡ ಮುಚ್ಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next