Advertisement

ಪಕ್ಷ ಸಂಘಟನೆ ಬಗ್ಗೆ ಬಿಜೆಪಿ ಪ್ರಮುಖ ನಾಯಕರ ಸಭೆ

03:40 PM Dec 28, 2021 | Team Udayavani |

ಹುಬ್ಬಳ್ಳಿ: ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಬೆಳಿಗ್ಗೆ ನಡೆದ ಪಕ್ಷ ಪ್ರಮುಖರ ಸಭೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗಳು 150 ಸ್ಥಾನ ಗೆಲುವಿನ ಗುರಿ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಯಿತು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ ತಿಳಿಸಿದರು.

Advertisement

ಪಕ್ಷ ಪ್ರಮುಖರ ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಅವರು, ಮಾರ್ಗದರ್ಶನ ಮಾಡಿದರಲ್ಲದೆ, ಅನೇಕ ಸಲಹೆ ನೀಡಿದರು. ರಾಜ್ಯದ ಸುಮಾರು 56 ಸಾವಿರಕ್ಕೂ ಅಧಿಕ ಬೂತ್ ಗಳಲ್ಲಿನ ಪೇಜ್ ಪ್ರಮುಖರನ್ನು ಚುನಾವಣೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಚರ್ಚೆಯಾಯಿತು. ರಾಜ್ಯ ಕೋರ್ ಕಮಿಟಿ ಸಭೆ ಸಮಯ ಇನ್ನು ನಿರ್ಧಾರವಾಗಿಲ್ಲ. ರಾಜ್ಯ ಕಾರ್ಯಕಾರಿಣಿಗೆ 300 ಜನ ಆಪೇಕ್ಷಿತರು ಇದ್ದು 260 ಅಧಿಕ ಜನ ಪಾಲ್ಗೊಂಡಿದ್ದಾರೆ.

ಪ್ರದರ್ಶನ ಉದ್ಘಾಟನೆ: ಬಿಜೆಪಿ ಆಯೋಜಿಸಿದ್ದ ಪ್ರದರ್ಶನಕ್ಜೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಚಾಲನೆ ನೀಡಿದರು. ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next