Advertisement

ಅಂಬಲಪಾಡಿ ದೇಗುಲಕ್ಕೆ ಎಚ್‌.ಡಿ.ದೇವೇಗೌಡ ಭೇಟಿ

06:49 AM May 16, 2019 | Lakshmi GovindaRaj |

ಉಡುಪಿ: ಮೂಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಬುಧವಾರ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದರು.

Advertisement

ದೇಗುಲದ ಧರ್ಮದರ್ಶಿ ಡಾ| ನಿ.ಬೀ.ವಿಜಯ ಬಲ್ಲಾಳ್‌ ಗೌಡರನ್ನು ಸ್ವಾಗತಿಸಿ, ಪ್ರಸಾದ ನೀಡಿದರು. ದೇಗುಲದಲ್ಲಿ ನಡೆಯುವ ಪೂಜೆ, ವಿಶೇಷ ಕಾರ್ಯಕ್ರಮ, ಭಕ್ತರು ಕೊಡುವ ಸೇವೆಗಳ ಬಗ್ಗೆ ಧರ್ಮದರ್ಶಿಗಳಿಂದ ಮಾಹಿತಿ ಪಡೆದ ಗೌಡರು,

ಮೇ 24ಕ್ಕೆ ದೇವೇಗೌಡ -ಚೆನ್ನಮ್ಮ ಹಾಗೂ ತಮ್ಮ ಕುಟುಂಬಸ್ಥರ ಹೆಸರಿನಲ್ಲಿ ಸರ್ವಪೂಜೆ ನಡೆಸುವಂತೆ ತಿಳಿಸಿ, 250 ರೂ.ನೀಡಿ ರಶೀದಿ ಪಡೆದುಕೊಂಡರು. ಕೆಲವು ದಿನಗಳಿಂದ ಮೂಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೌಡರು, ಪ್ರತಿದಿನವೂ ಪತ್ನಿ ಚೆನ್ನಮ್ಮ ಅವರೊಂದಿಗೆ ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next