Advertisement

ಮೀರಾಗಾಂವ್‌ ಮಹಾಲಿಂಗೇಶ್ವರ ದೇವಸ್ಥಾನ: ಶ್ರೀ ಅಯ್ಯಪ್ಪ ಮಹಾಪೂಜೆ

11:34 AM Dec 18, 2017 | |

ಮುಂಬಯಿ: ಆಚಾರ-ವಿಚಾರಗಳ ಮೇಲೆ ಹಾಗೂ ಆಹಾರ ಮೊದಲಾದವುಗಳ ಮೇಲೆ ನಿರ್ಬಂಧವನ್ನು  ಹಾಕಿ ಭಗವಂತನ ಸಾಮೀಪ್ಯವನ್ನು ಹೊಂದುವುದೇ ಪ್ರತಿಯೊಂದು ವ್ರತದ ವಿಶೇಷತೆಯಾಗಿದೆ. ಸನಾತನ ಧರ್ಮಗಳ ಪ್ರಕಾರ ವಿವಿಧ ವ್ರತಗಳು ಮಾನವನ ನ್ಯೂನತೆಗಳನ್ನು ದೂರಗೊಳಿಸಿ ಸನ್ಮಾರ್ಗವನ್ನು ಪ್ರಾಪ್ತಿಸುವ ಸಾಧನಗಳಾಗಿವೆ ಎಂದು ಮೀರಾಗಾಂವ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ ಹಾಗೂ ಪ್ರಧಾನ ಅರ್ಚಕ ಸಾಂತಿಂಜ ಜನಾದ‌ìನ ಭಟ್‌ ಅವರು ನುಡಿದರು.

Advertisement

ಡಿ. 16ರಂದು ಮೀರಾರೋಡ್‌ ಪೂರ್ವದ ಮೀರಾಗಾಂವ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಮಹಾಲಿಂಗೇಶ್ವರ ಟ್ರಸ್ಟ್‌ ಇದರ 26ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಅಯ್ಯಪ್ಪ ವ್ರತಧಾರಿಗಳು ಶ್ರದ್ಧಾ, ಭಕ್ತಿಯಿಂದ ಪಾಲಿಸಿದ ಒಂದು ಮಂಡಲದ ಕಠಿನ ವ್ರತಗಳನ್ನು ಜೀವನ ಪರ್ಯಂತ ಅನುಷ್ಠಾನಗೊಳಿಸಿ ಧರ್ಮ ರಕ್ಷಕರಾಗಿ ಮೆರೆಯಬೇಕು ಎಂದು ನುಡಿದು ಎಲ್ಲರಿಗೂ ಶುಭ ಹಾರೈಸಿದರು.

ಧಾರ್ಮಿಕ ಕಾರ್ಯಕ್ರಮವಾಗಿ ಸಾಂತಿಂಜ ಜನಾದ‌ìನ್‌ ಭಟ್‌ ಅವರ ನೇತೃತ್ವದಲ್ಲಿ ಬೆಳಗ್ಗೆ ಮಹಾಗಣಪತಿ ಹೋಮ, ಅಭಿಷೇಕ, ಉಷಾಪೂಜೆ, ಪರಿವಾರ ದೇವರಿಗೆ ವಿಶೇಷ ಪೂಜೆ ನಡೆಯಿತು. ಮೀರಾರೋಡ್‌ ಶ್ರೀ ಅಯ್ಯಪ್ಪ ಭಕ್ತಮಂಡಳಿಯ ಗುರುಸ್ವಾಮಿ ಜಯಶೀಲ ತಿಂಗಳಾಯ ಹಾಗೂ ಇತರ ಮಾಲಾಧಾರಿ ಸ್ವಾಮಿಗಳಿಂದ ಶರಣು ಘೋಷ, ಅಯ್ಯಪ್ಪ ಕೀರ್ತನೆ, ಪಡಿಪೂಜೆ ಮೊದಲಾದ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.

ಮೀರಾರೋಡ್‌ ಶ್ರೀ ಲಕ್ಷ್ಮೀನಾರಾಯಣ ಭಜನ ಮಂಡಳಿ ಮತ್ತು ಎರ್ಮಾಳ್‌ ಬಡಾ ಶ್ರೀ ವಿಷ್ಣು ಭಜನ ಮಂಡಳಿ ಸದಸ್ಯರು ಭಜನ ಕಾರ್ಯಕ್ರಮ ನೀಡಿದರು. ಆಡಳಿತ ಮೊಕ್ತೇಸರರಾದ ಶಿಮಂತೂರು ಮಜಲಗುತ್ತು ರಂಜನ್‌ (ಬಾಬಾ) ಶೆಟ್ಟಿ, ಸ್ಥಾಪಕರಾದ ಕೃಷ್ಣ ಜಿ. ಶೆಟ್ಟಿ, ಅರ್ಚಕ ಮಾಧವ ಭಟ್‌, ಕಾರ್ಯದರ್ಶಿ ಪ್ರಮೋದ್‌ ವಿ. ಮ್ಹಾತ್ರೆ, ಕೋಶಾಧಿಕಾರಿ ವೆಂಕಟೇಶ್‌ ಡಿ. ಪಾಟೀಲ್‌, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು, ಅರ್ಚಕವೃಂದದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ರಾತ್ರಿ ದೀಪಾರಾಧನೆ ಮತ್ತು ಮಹಾಪೂಜೆ ನೆರವೇರಿತು.

ಸ್ಥಳೀಯ ಶಾಸಕರು, ನಗರ ಸೇವಕರು, ವಿವಿಧಸಮುದಾಯ ಸಂಘಟನೆಗಳ ಪದಾಧಿಕಾರಿಗಳು, ತುಳು-ಕನ್ನಡಿಗರು, ಭಕ್ತಾದಿಗಳು ಅಧಿಕ ಸಂಖ್ಯೆ ಯಲ್ಲಿ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಅಯ್ಯಪ್ಪ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next