Advertisement

Kundapura: ವೈದ್ಯಾಧಿಕಾರಿ ಡಾ| ರಾಬರ್ಟ್‌ಗೆ ಜಾಮೀನು ಮಂಜೂರು

07:01 PM Jun 08, 2024 | Team Udayavani |

ಕುಂದಾಪುರ: ಲೈಂಗಿಕ ದೌರ್ಜನ್ಯ ಆರೋಪದಡಿ ಮುಂಬಯಿಯಲ್ಲಿ ಬಂಧಿಸಲ್ಪಟ್ಟ ಇಲ್ಲಿನ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ| ರಾಬರ್ಟ್‌ ರೆಬೆಲ್ಲೋ ಅವರಿಗೆ ಶುಕ್ರವಾರ ತಡರಾತ್ರಿ ಬೈಂದೂರು ನ್ಯಾಯಾಲಯ ಜಾಮೀನು ನೀಡಿದೆ.

Advertisement

ಲೈಂಗಿಕ ದೌರ್ಜನ್ಯ, ವಾಟ್ಸ್‌ ಆ್ಯಪ್‌ ಚಾಟ್‌ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ, ಮಾನಸಿಕ ಕಿರುಕುಳ ಸಹಿತ ಹಲವು ಆರೋಪಗಳನ್ನು ಎದುರಿಸುತ್ತಿದ್ದ ಡಾ| ರಾಬರ್ಟ್‌ ವಿರುದ್ಧ ಸಹ ವೈದ್ಯೆ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೇಸು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ವೈದ್ಯರನ್ನು ಪೊಲೀಸರು ಮುಂಬಯಿಯ ರೆಸಾರ್ಟ್‌ವೊಂದರಲ್ಲಿ ಬಂಧಿಸಿ, ರಾತ್ರಿ ಬೈಂದೂರು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದರು.

ಆದರೆ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕೆ ನೋಟಿಸ್‌ ನೀಡಿದ್ದು, ಸೇರಿದಂತೆ ಆಡಳಿತಾತ್ಮಕ ವೈಷಮ್ಯದಿಂದ ಕೇಸು ದಾಖಲಿಸಲಾಗಿದೆ ಎಂದು ವೈದ್ಯರ ಪರ ವಕೀಲರು ವಾದ ಮಂಡಿಸಿದ್ದು, ನ್ಯಾಯಾಲಯ ಜಾಮೀನು ನೀಡಿದೆ. ಮಧ್ಯರಾತ್ರಿ ನ್ಯಾಯಾಧೀಶರ ಮನೆಗೆ ಲೈಂಗಿಕ ದೌರ್ಜನ್ಯ ಕೇಸಿನ ಆರೋಪಿಯನ್ನು ಹಾಜರುಪಡಿಸಿದಾಗ ಜಾಮೀನು ನೀಡಿದ ವಿಶೇಷ ಪ್ರಕರಣ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next