Advertisement

ನರಸಿಂಹ ರಾವ್‌ ಮಾಧ್ಯಮ ಸಲಹೆಗಾರ ಪಿ ವಿ ಆರ್‌ ಕೆ ಪ್ರಸಾದ್‌ ನಿಧನ

10:46 AM Aug 21, 2017 | Team Udayavani |

ಹೈದರಾಬಾದ್‌ : ದಿವಂಗತ ಪ್ರಧಾನಿ ಪಿ ವಿ ನರಸಿಂಹ ರಾವ್‌ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಹಾಗೂ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಪಿ ವಿ ಆರ್‌ ಕೆ ಪ್ರಸಾದ್‌ (77) ಅವರಿಂದು ನಸುಕಿನ ವೇಳೆ ಇಲ್ಲಿನ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ  ಹೃತ್‌ಕ್ರಿಯೆ ನಿಂತು ನಿಧನ ಹೊಂದಿದರು. 

Advertisement

ಆಂಧ್ರ ಪ್ರದೇಶ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದ ಪ್ರಸಾದ್‌ ಅವರು ತಿರುಮಲ ತಿರುಪತಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾಗಿ, ವಿಶಾಖಪಟ್ಟಣ ಬಂದರು ಮಂಡಳಿಯ ಅಧ್ಯಕ್ಷರಾಗಿ ಮಾತ್ರವಲ್ಲದೆ ಹಲವಾರು ಹೊಣೆಗಾರಿಕೆಗಳನ್ನು ನಿಭಾಯಿಸಿದ್ದರು. 

ಮಾಜಿ ಪ್ರಧಾನಿ ದಿವಂಗತ ನರಸಿಂಹ ರಾವ್‌ ಅವರಿಗೆ ನಿಕಟರಾಗಿದ್ದ ಪ್ರಸಾದ್‌ ಅವರು ರಾವ್‌ ಅವರ ಮಾಧ್ಯಮ ಸಲಹೆಗಾರರಾಗಿಯೂ ದುಡಿದಿದ್ದರು. ಅವರು ಪತ್ನಿ, ಓರ್ವ ಪುತ್ರಿ, ಪತ್ರನನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಇಂದಿಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next