Advertisement

ಸಿಎಂ ಕುಮಾರಸ್ವಾಮಿಗೂ ಮೀ ಟೂ ಎಚ್ಚರಿಕೆ! ಕುಮಾರ್ ಬಂಗಾರಪ್ಪ ಆಕ್ರೋಶ

01:26 PM Oct 30, 2018 | Sharanya Alva |

ಶಿವಮೊಗ್ಗ: ಬಾಲಿವುಡ್, ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಬೀಸಿದ್ದ ಮೀ ಟೂ ಅಭಿಯಾನ ಇದೀಗ ರಾಜಕೀಯ ರಂಗಕ್ಕೂ ಪ್ರವೇಶಿಸಲು ಬಿಜೆಪಿ ಮುಖಂಡ, ಶಾಸಕ ಕುಮಾರ್ ಬಂಗಾರಪ್ಪ ವೇದಿಕೆ ಹಾಕಿಕೊಟ್ಟಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೇ ನೀವೂ ಕೂಡಾ ಮೀ ಟೂ ಅಭಿಯಾನದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ ಎಚ್ಚರ ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ.

Advertisement

ಮಂಗಳವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಯಾಕೆ ಅವರನ್ನು ಚುನಾವಣಾ ಅಖಾಡಕ್ಕೆ ನಿಲ್ಲಿಸುತ್ತಿಲ್ಲ. ಯಾರನ್ನ ಸರ್ ಎಂದಾಗ..ಯಾರನ್ನು ಇಟ್ಟುಕೊಂಡಿದ್ದಾರೋ ಅವರನ್ನು..ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಕುಮಾರಸ್ವಾಮಿ ಅಂತ ಹಾಕಿಕೊಂಡಿದ್ದಾರಲ್ಲ ಅವರನ್ನು ಎಂದು ವಾಗ್ದಾಳಿ ನಡೆಸಿದರು.

ಸಿಎಂ ಕುಮಾರಸ್ವಾಮಿ ಅವರ ವೈಯಕ್ತಿಕ ವಿಚಾರ ಕೆದಕಿದ ಕುಮಾರ್ ಬಂಗಾರಪ್ಪ ಅವರು, ಕೇವಲ ಚುನಾವಣೆಗಾಗಿ ನಮ್ಮ ಕುಟುಂಬವನ್ನು ಬೀದಿಗೆ ತರುತ್ತಿದ್ದೀರಾ? ನನ್ನ ವೈಯಕ್ತಿವಾಗಿ ತೇಜೋವಧೆ ಮಾಡಿದ್ದಕ್ಕೆ, ನಾನೂ ಕೂಡಾ ನಿಮ್ಮ ವೈಯಕ್ತಿಕ ವಿಚಾರ ಬಹಿರಂಗವಾಗಿ ಹೇಳುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಸರು ರಾಧಿಕಾ ಕುಮಾರಸ್ವಾಮಿ ಅಂತ ಬಳಸಿಕೊಳ್ಳುತ್ತಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಕೂಡಾ ಹಾಕಿಕೊಂಡಿದ್ದಾರೆ. ಹೀಗಾಗಿ ಯಾರಿಗೆ ಶೋಷಣೆಯಾಗಿದೆಯೋ ಅವರು ದೂರು ನೀಡಿದರೆ, ನೀವೂ ಕೂಡಾ ಮೀ ಟೂ ಆರೋಪದಡಿ ಸಿಲುಕಿಕೊಳ್ಳುತ್ತೀರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next