Advertisement

ಕುತ್ತಿಗೆ ಕೊಯ್ದುಕೊಂಡು MD ಅಂತಿಮ ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

11:38 AM Aug 01, 2017 | Team Udayavani |

ಮಂಗಳೂರು: ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜಿನ ಎಂ.ಡಿ. (ಪೆಥಾಲಜಿ) ಅಂತಿಮ ವರ್ಷದ ವಿದ್ಯಾರ್ಥಿ ದಾವಣಗೆರೆ ಮೂಲದ ಎಚ್‌.ಕೆ. ಪ್ರಸಾದ್‌ (28) ಹಾಸ್ಟೆಲ್‌ನ ಕೋಣೆಯಲ್ಲಿ ಕುತ್ತಿಗೆಗೆ ಬ್ಲೇಡ್‌ನಿಂದ ಕೊಯ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಹಾಸ್ಟೆಲ್‌ನ ಕೊಠಡಿಯಲ್ಲಿ ಒಬ್ಬನೇ ವಾಸ್ತವ್ಯವಿದ್ದು, ಶನಿವಾರ ಆತನನ್ನುಕೆಲವರು ನೋಡಿದ್ದಾರೆ. ರವಿವಾರ ಮನೆಯವರು ಆತನಿಗೆ ಕರೆ ಮಾಡಿ ಸಂಪರ್ಕಕ್ಕೆ ಪ್ರಯತ್ನಿಸಿದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಆತಂಕಗೊಂಡ ಮನೆಯವರು ಸೋಮವಾರ ಬೆಳಗ್ಗೆ ಕಾಲೇಜಿಗೆ ಕರೆ ಮಾಡಿದ್ದಾರೆ. ಕಾಲೇಜು ಆಡಳಿತ ಮಂಡಳಿ ಸಿಬಂದಿ ಹಾಸ್ಟೆಲ್‌ ರೂಮ್‌ಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿರುವುದು ಪತ್ತೆಯಾಗಿದೆ.

ಆವರು ಮಾನಸಿಕವಾಗಿ ಖನ್ನರಾಗಿದ್ದು, ಮನೋ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ರೂಮಿನಲ್ಲಿ ಡೆತ್‌ನೋಟ್‌ ಪತ್ತೆಯಾಗಿದ್ದು, ಅದರಲ್ಲಿ “ನಾನು ಎಲ್ಲವನೂ ಬಿಟ್ಟು ಹೋಗುತ್ತಿದ್ದೇನೆ, ಯಮರಾಜ ನನ್ನನ್ನು ಕರೆಯುತ್ತಿದ್ದಾನೆ’ ಎಂದು ಬರೆದಿಟ್ಟಿದ್ದಾನೆ. ತನ್ನ ಆಸ್ತಿ ಮತ್ತು ಹಣ ಯಾರಿಗೆ ಸೇರ ಬೇಕೆಂಬುದನ್ನು ಕೂಡ ನಮೂದಿಸಿದ್ದಾರೆ ಎಂದು ತಿಳಿದು ಬಂದಿದೆ. ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next