Advertisement
ಮಾರುಕಟ್ಟೆ ಶೀಘ್ರ ಸ್ಥಳಾಂತರ ಸುರತ್ಕಲ್ ಮಾರುಕಟ್ಟೆ ಸ್ಥಳಾಂತರ ಪ್ರಕ್ರಿಯೆ ಒಂದು ತಿಂಗಳಲ್ಲಿ ನಡೆಯಲಿದ್ದು, ತರಕಾರಿ, ಮೀನು ಮಾರುಕಟ್ಟೆ ಮತ್ತಿತರ ತಾತ್ಕಾಲಿಕ ಅಂಗಡಿಗಳ ನಿರ್ಮಾಣ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಪಾಲಿಕೆಯ ಎಂಜಿನಿಯರ್ಗಳು ತಿಳಿಸಿದರು. ಮುಖ್ಯಮಂತ್ರಿಗಳು ನೂತನ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ 50 ಕೋ.ರೂ. ಎಸ್ಎಫ್ಸಿ ನಿಧಿಯಿಂದ ಒದಗಿಸಿದ್ದು, ಸ್ವತಃ ಅವರೇ ಶಿಲಾನ್ಯಾಸ ಮಾಡಲು ಒಪ್ಪಿಕೊಂಡಿದ್ದಾರೆ. ಅದರ ತಯಾರಿ ಕುರಿತಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಕಾರ್ಪೊರೇಟರ್ ಬಶೀರ್ ಅಹ್ಮದ್, ಅಶೋಕ್ ಶೆಟ್ಟಿ ತಡಂಬೈಲ್, ಪಾಲಿಕೆಯ ಹಿರಿಯ ಎಂಜಿನಿಯರ್ ಗಣೇಶ್, ಸುರತ್ಕಲ್ ವಲಯಾಯುಕ್ತ ರವಿಶಂಕರ್, ಎಂಜಿನಿಯರ್ಗಳಾದ ದೇವರಾಜ್, ಖಾದರ್ ಉಪಸ್ಥಿತರಿದ್ದರು.