Advertisement

ಪ್ರಾಕೃತಿಕ ವಿಕೋಪ ಸಮೀಕ್ಷೆಗೆ ಸೂಚನೆ

02:10 AM Jul 11, 2017 | Team Udayavani |

ಸುರತ್ಕಲ್‌: ಮಳೆ ಸಂದರ್ಭದಲ್ಲಿ ಆಗುವ ಅನಾಹುತದ ಸಮೀಕ್ಷೆ ನಡೆಸಿ ಶೀಘ್ರ ಕ್ರಮ ಕೈಗೊಂಡು ಪರಿಹಾರ ಒದಗಿಸಲು ಮುತುವರ್ಜಿ ವಹಿಸಬೇಕು ಎಂದು ಶಾಸಕ ಮೊದಿನ್‌ ಬಾವಾ ಹೇಳಿದರು. ಪಾಲಿಕೆಯ ಸುರತ್ಕಲ್‌ ಉಪಕಚೇರಿಯಲ್ಲಿ ಜರಗಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡುಗಳ ಅಭಿವೃದ್ಧಿ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ವಾರ್ಡುಗಳ ಅಭಿವೃದ್ಧಿಗೆ ಪೂರಕವಾದ ಸಮೀಕ್ಷೆ ಹಾಗೂ ಅಂದಾಜು ಪಟ್ಟಿ ಮಾಡಲಾಗಿದ್ದರೂ ವಿಳಂಬ ಕಾಮಗಾರಿ ನಡೆಯದಂತೆ ಅಧಿಕಾರಿಗಳು ತತ್‌ಕ್ಷಣ ಕ್ರಮಕೈಗೊಳ್ಳಬೇಕು ಎಂದರು.

Advertisement

ಮಾರುಕಟ್ಟೆ ಶೀಘ್ರ ಸ್ಥಳಾಂತರ 
ಸುರತ್ಕಲ್‌ ಮಾರುಕಟ್ಟೆ ಸ್ಥಳಾಂತರ ಪ್ರಕ್ರಿಯೆ ಒಂದು ತಿಂಗಳಲ್ಲಿ ನಡೆಯಲಿದ್ದು, ತರಕಾರಿ, ಮೀನು ಮಾರುಕಟ್ಟೆ ಮತ್ತಿತರ ತಾತ್ಕಾಲಿಕ ಅಂಗಡಿಗಳ ನಿರ್ಮಾಣ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಪಾಲಿಕೆಯ ಎಂಜಿನಿಯರ್‌ಗಳು ತಿಳಿಸಿದರು. ಮುಖ್ಯಮಂತ್ರಿಗಳು ನೂತನ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ 50 ಕೋ.ರೂ. ಎಸ್‌ಎಫ್‌ಸಿ ನಿಧಿಯಿಂದ ಒದಗಿಸಿದ್ದು, ಸ್ವತಃ ಅವರೇ ಶಿಲಾನ್ಯಾಸ ಮಾಡಲು ಒಪ್ಪಿಕೊಂಡಿದ್ದಾರೆ. ಅದರ ತಯಾರಿ ಕುರಿತಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಕಾರ್ಪೊರೇಟರ್‌ ಬಶೀರ್‌ ಅಹ್ಮದ್‌, ಅಶೋಕ್‌ ಶೆಟ್ಟಿ ತಡಂಬೈಲ್‌, ಪಾಲಿಕೆಯ ಹಿರಿಯ ಎಂಜಿನಿಯರ್‌ ಗಣೇಶ್‌, ಸುರತ್ಕಲ್‌ ವಲಯಾಯುಕ್ತ ರವಿಶಂಕರ್‌, ಎಂಜಿನಿಯರ್‌ಗಳಾದ ದೇವರಾಜ್‌, ಖಾದರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next