Advertisement

ಪೇಜಾವರಶ್ರೀ ಪ್ರಧಾನಿಯೋ, ಮುಖ್ಯಮಂತ್ರಿಯೋ: ಎಂಬಿ ಪಾಟೀಲ್ ಕಿಡಿ

09:48 AM Aug 03, 2019 | Nagendra Trasi |

ವಿಜಯಪುರ: ಉಡುಪಿಯ ಪೇಜಾವರಶ್ರೀಗಳು ಕರೆದಲ್ಲಿಗೆ ಹೋಗಲು ಅವರೇನು ಪ್ರಧಾನಿನಾ? ಮುಖ್ಯಮಂತ್ರಿಯಾ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಂಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ, ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಮೊದಲು ಪೇಜಾವರಶ್ರೀಗಳು ತಮ್ಮ ಮಠದಲ್ಲಿನ ಹುಳುಕನ್ನು ಮುಚ್ಚಿಕೊಳ್ಳಲಿ ಎಂದರು. ತಮ್ಮ ಮಠಗಳಿಗೆ ದಲಿತ ಪೀಠಾಧಿಪತಿಯಾಗಲಿ ಅಥವಾ ಲಿಂಗಾಯತರನ್ನು ಪೀಠಾಧಿಪತಿಯನ್ನಾಗಿ ನೇಮಕ ಮಾಡಲಿ ಎಂದು ಸವಾಲು ಹಾಕಿದರು.

ಇತ್ತೀಚೆಗೆ ಮೈಸೂರಿನಲ್ಲಿ ಪೇಜಾವರಶ್ರೀಗಳು, ಶಿವನನ್ನು ಆರಾಧಿಸುವವರೆಲ್ಲ ಹಿಂದೂಗಳೇ, ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸುವ ಎಂಬಿ ಪಾಟೀಲ್, ಜಾಮ್ ಧಾರ್, ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಸೇರಿದಂತೆ ಧರ್ಮದ ವಿಚಾರದ ಬಗ್ಗೆ ಚರ್ಚಿಸಲಿ ಎಂದು ಪಂಥಾಹ್ವಾನ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next