Advertisement

Koppala; ಅಮಾನತ್ತು ಮಾಡುವುದರಲ್ಲೆ ಇತಿಹಾಸ ಮಾಡುತ್ತಿದ್ದಾರೆ: ಎಂ.ಬಿ ಪಾಟೀಲ್ ಟೀಕೆ

03:46 PM Dec 21, 2023 | Team Udayavani |

ಕೊಪ್ಪಳ: ಸಂಸದರಿಂದ ಸಂವಿಧಾನಾತ್ಮಕವಾಗಿ ಪ್ರತಿಭಟನೆ ನಡೆಸಲಾಗುತ್ತದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಸಂಸದರ ಅಮಾನತ್ತು ಮಾಡಲಾಗಿದೆ. ಅಮಾನತ್ತು ಮಾಡುವುದರಲ್ಲೇ ಇತಿಹಾಸ ಮಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

Advertisement

ಕೊಪ್ಪಳ ಜಿಲ್ಲೆಯ ತಾವರಗೇರಾದಲ್ಲಿ ಮಾತನಾಡಿದ ಅವರು, ವೀರಶೈವ ಸಮಾವೇಶ ಭಾಗವಹಿಸುವ ಬಗ್ಗೆ ಇನ್ನೂ ವಿಚಾರ ಮಾಡುವೆ. ಈ ಬಗ್ಗೆ ನೀವು ಶ್ಯಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಅವರನ್ನ ಕೇಳಬೇಕು ಎಂದರು.

ಶಾಸಕ ಬಿ ಆರ್ ಪಾಟೀಲ್ ಅಸಮಾಧಾನ ವಿಚಾರಕ್ಕೆ ಮಾತನಾಡಿದ ಅವರು, ಬಿ.ಆರ್ ಪಾಟೀಲ್ ನಮ್ಮ ಪಕ್ಷದ ಹಿರಿಯರು. ಅದು ಹಳೆಯ ಸರ್ಕಾರ ಮಂಡಿಸಿದ ಬಜೆಟ್ ಎಂದು ಸಿಎಂ ಅವರೇ ಹೇಳಿದ್ದಾರೆ. ಅದನ್ನು ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದೇವೆ. ಹಿಂದಿನ ಸರ್ಕಾರ ಲಕ್ಷಾಂತರ ರೂ ಬಾಕಿಯಿಟ್ಟು ಹೋಗಿದ್ದಾರೆ. ನಮ್ಮ ಸಿಎಂ ಸಮರ್ಥರಿದ್ದಾರೆ. ಮಾರ್ಚ್ ಒಳಗೆ ನಮಗೆ ಹಣ ಕೊಡುತ್ತಾರೆ. ಶಾಸಕರಿಗೂ ಮಾರ್ಚ್ ಒಳಗೆ ಹಣ ಕೊಡುತ್ತಾರೆ ಎಂದು ಎಂ.ಬಿ ಪಾಟೀಲ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next