Advertisement

Shimoga; ಈಶ್ವರಪ್ಪ ಮನಸ್ಸಿನ ನೋವು ಬೇಗ ಪರಿಹಾರವಾಗಲಿ: ಆನಂದ ಗುರೂಜಿ

01:14 PM Mar 17, 2024 | keerthan |

ಶಿವಮೊಗ್ಗ: ಕೆ.ಎಸ್ ಈಶ್ವರಪ್ಪ ಅವರ ಮನಸ್ಸಿಗೆ ಬಹಳ ನೋವಾಗಿದೆ. ಈಶ್ವರಪ್ಪ ಮನಸ್ಸಿನಲ್ಲಿರುವ ನೋವು ಬೇಗ ಪರಿಹಾರವಾಗಲಿ ಎಂದು ಆನಂದ ಗುರೂಜಿ ಹೇಳಿದರು.

Advertisement

ಈಶ್ವರಪ್ಪ ಅವರನ್ನು ಭೇಟಿಯಾದ ಆನಂದ ಗುರೂಜಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಯಿ ಚಾಮುಂಡೇಶ್ವರಿ ಹಾಗೂ ಮಾರಿಕಾಂಬೆಯ ಆಶೀರ್ವಾದ ಇವರ ಮೇಲಿದೆ. ಈಶ್ವರಪ್ಪ ಮಾರಿಕಾಂಬ ಫೈನಾನ್ಸ್ ಮೂಲಕ ಸಾವಿರಾರು ಮಹಿಳೆಯರಿಗೆ ಕೆಲಸ ನೀಡಿದ್ದಾರೆ. ಅವರಿಗೆ ಮಹಿಳೆಯರ ಆಶೀರ್ವಾದವೂ ಇದೆ ಎಂದರು.

ಈಶ್ವರಪ್ಪನವರು ಹಿಂಧೂ ಧರ್ಮದ ಪ್ರತಿಪಾದಕರಾಗಿದ್ದಾರೆ. ಹಿಂದೂ ಧರ್ಮವನ್ನು ಉಳಿಸಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರು ಜಯಶಾಲಿಯಾಗಲಿ ಎಂದು ಹಾರೈಸಲು ಬಂದಿದ್ದೇನೆ. ಈಶ್ವರಪ್ಪನವರಿಗೆ ಆಶೀರ್ವಾದ ಮಾಡಲು ಬಂದಿದ್ದೆನೆ ಎಂದು ಆನಂದ ಗುರೂಜಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next