Advertisement

Mantralayam; ಸಿದ್ದರಾಮಯ್ಯರೂ ರಾಮನ ಆದರ್ಶ, ಜನಾನುರಾಗ ಪಡೆಯಲಿ: ಸುಬುಧೇಂದ್ರ ತೀರ್ಥರು

02:56 PM Jan 02, 2024 | Team Udayavani |

ರಾಯಚೂರು: ಸಿಎಂ ಸಿದ್ದರಾಮಯ್ಯನವರು ಶ್ರೀರಾಮನ ಹೆಸರಿಟ್ಟುಕೊಂಡಿದ್ದಾರೆ. ಆದ್ದರಿಂದ ಅವರೂ ಶ್ರೀರಾಮನ ಆದರ್ಶ, ಜನಾನುರಾಗ ಪಡೆಯಲಿ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಭಿಪ್ರಾಯಪಟ್ಟರು.

Advertisement

ಮಾಜಿ ಸಚಿವ ಆಂಜನೇಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಭು ಶ್ರೀರಾಮ ಎಲ್ಲ ರೀತಿಯಿಂದಲೂ ಆದರ್ಶನೀಯ, ಅನುಕರಣನೀಯ. ಶ್ರೀ ರಾಮನ ಹೋಲಿಕೆ ಮತ್ತೊಬ್ಬರಿಗೆ ಮಾಡುವುದು ಸರಿಯಲ್ಲ ಎಂದರು.

ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಯಾವುದೇ ದೇಶವಿದ್ರೋಹದ ಕೆಲಸವಾಗಲಿ, ಸಮುದಾಯಗಳ ನಡುವಿನ ಸಂಘರ್ಷವಾಗಲಿ ಅಲ್ಲ. ಅಲ್ಲಿ ಮಂದಿರ ನಿರ್ಮಿಸುವುದು ನಮ್ಮೆಲ್ಲರ ಹಕ್ಕು. ದೇವಸ್ಥಾನ ಉದ್ಘಾಟನೆ ದಿನ ಇಡೀ ವಿಶ್ವಕ್ಕೆ ಶಕ್ತಿದಾಯಕ ದಿನವಾಗಲಿದೆ. ಬಾಲರಾಮನ ವಿಗ್ರಹ ಮತ್ತು ಶಿಲ್ಪಿ ಕರ್ನಾಟಕದವರು ಎಂಬುದು ಹೆಮ್ಮೆಯ ಸಂಗತಿ ಎಂದರು.

ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ನಮಗೂ ಆಹ್ವಾನ ಬಂದಿದೆ. ಪೂರ್ವ ನಿಯೋಜಿತ ಕಾರ್ಯಕ್ರಮಗಳನ್ನು ಹೊಂದಿಸಿಕೊಂಡು ಪಾಲ್ಗೊಳ್ಳಲಾಗುವುದು. ಈ ಕಾರ್ಯಕ್ರಮಕ್ಕೆ ಹೋಗಲಾರದವರು ಇರುವಲ್ಲಿಂದಲೇ ಪ್ರಾರ್ಥನೆ, ಪೂಜೆ ಸಲ್ಲಿಸಬೇಕು. ಅವರವರ ಗ್ರಾಮಗಳ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next