Advertisement

ಮೇ 12: ದುಬಾೖಯಿಂದ ಮಂಗಳೂರಿಗೆ ವಿಮಾನ

01:23 PM May 08, 2020 | mahesh |

ಮಂಗಳೂರು: ಕೋವಿಡ್ ದಿಂದ ದುಬಾೖಯಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಕರಾವಳಿ ಭಾಗದ ಜನರನ್ನು ಹೊತ್ತ ಮೊದಲ ವಿಮಾನವು ಮೇ 12ರಂದು ಮಂಗಳೂರಿಗೆ ಆಗಮಿಸಲಿದೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಈ ವಿಷಯವನ್ನು “ಉದಯವಾಣಿ’ಗೆ ಖಚಿತಪಡಿಸಿದ್ದಾರೆ. ಕೇರಳ ಮತ್ತಿತರ ಭಾಗಗಳ ಜನರನ್ನು ಕರೆ ತರಲು ವಿಮಾನ ವ್ಯವಸ್ಥೆ ಮಾಡಿರುವಾಗ ಕರ್ನಾಟಕ ಕರಾವಳಿಯ ಜನರನ್ನು ಕರೆತರಲು ವ್ಯವಸ್ಥೆ ಮಾಡಿಲ್ಲ ವೇಕೆ ಎಂದು ಹಲವಾರು ಮಂದಿ ಪ್ರಶ್ನಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ವಿಮಾನಯಾನ ಸಚಿವರ ಜತೆ ಮಾತನಾಡಿ ದುಬಾೖಯಿಂದ ವಿಮಾನ ಸೇವೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

ಈ ವಿಮಾನದಲ್ಲಿ ಹಿರಿಯ ನಾಗರಿಕರು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಗರ್ಭಿಣಿಯರು ಸೇರಿದಂತೆ ತುರ್ತಾಗಿ ತಾಯ್ನಾಡಿಗೆ ಆಗಮಿಸಬೇಕಾಗಿ ರುವ 177 ಮಂದಿ ಮಂಗಳೂರಿಗೆ ಬರಲಿದ್ದಾರೆ. ಮೇ 13ರಂದು ದುಬಾೖಯಿಂದ ಮೊದಲ ವಿಮಾನ ಆಗಮಿಸುವ ಕುರಿತು ವೇಳಾಪಟ್ಟಿ ತಯಾರಿಸಲಾಗಿತ್ತು. ಆದರೆ ಈಗ ಒಂದು ದಿನ ಮೊದಲೇ ಮಂಗಳೂರಿಗೆ ಕೊಲ್ಲಿ ರಾಷ್ಟ್ರದಿಂದ ವಿಮಾನ ಆಗಮಿಸುತ್ತಿದೆ. ದುಬಾೖಯಿಂದ ಎರಡನೇ ವಿಮಾನವು ಮೇ 15ರಂದು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.

ದಿಲ್ಲಿ-ಬೆಂಗಳೂರು ರೈಲು
ಉತ್ತರ ಭಾರತದ ದಿಲ್ಲಿ, ಹರ್ಯಾಣ, ಪಂಜಾಬ್‌ ರಾಜ್ಯಗಳಲ್ಲಿ ಇರುವ ಕನ್ನಡಿಗರನ್ನು ಕರ್ನಾಟಕಕ್ಕೆ ಕರೆ ತರಲು ಮೇ 9ರಂದು ದಿಲ್ಲಿಯಿಂದ ಬೆಂಗಳೂರಿಗೆ ರೈಲು ವ್ಯವಸ್ಥೆ ಮಾಡಲಾಗಿದೆ. ದಿಲ್ಲಿಯ 620 ಮಂದಿ ಸೇರಿದಂತೆ ಒಟ್ಟು 920 ಮಂದಿ ಈ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ ಎಂದು ಸಚಿವ ಡಿವಿಎಸ್‌ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಲಂಡನ್‌ನಿಂದ ಬೆಂಗಳೂರಿಗೆ ವಿಮಾನ
ವಿದೇಶಗಳಲ್ಲಿರುವ 6,500 ಕನ್ನಡಿಗರು ಭಾರತಕ್ಕೆ  ಬರಲು ನೋಂದಾಯಿಸಿದ್ದಾರೆ. ಲಂಡನ್‌ನಿಂದ ಮೊದಲ ವಿಮಾನ ಮೇ 11ರಂದು ಬೆಂಗಳೂರಿಗೆ ಬರಲಿದ್ದು, 250 ಮಂದಿ ಕನ್ನಡಿಗರು ಆಗಮಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next