Advertisement

ಲಂಕಾ ತಂಡಕ್ಕೆ ಮ್ಯಾಥ್ಯೂಸ್‌ ವಾಪಸ್‌

11:26 PM Apr 18, 2019 | Sriram |

ಕೊಲಂಬೊ: ದಿಮುತ್‌ ಕರುಣರತ್ನೆ ಅವರನ್ನು ಶ್ರೀಲಂಕಾ ವಿಶ್ವಕಪ್‌ ಕ್ರಿಕೆಟ್‌ ತಂಡದ ನಾಯಕನನ್ನಾಗಿ ನೇಮಿಸಿದ ಒಂದು ದಿನದ ಬಳಿಕ ಈ ಪಂದ್ಯಾವಳಿಯ ಪ್ರಾಥಮಿಕ ತಂಡವನ್ನು ಪ್ರಕಟಿಸಲಾಗಿದೆ.

Advertisement

15 ಸದಸ್ಯರ ಈ ತಂಡಕ್ಕೆ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್‌ ವಾಪಸಾಗಿದ್ದಾರೆ. ಅವರು ಗಾಯಾಳಾಗಿ ಕೆಲವು ಸಮಯದಿಂದ ತಂಡದಿಂದ ಬೇರ್ಪಟ್ಟಿದ್ದರು. ಲಹಿರು ತಿರಿಮನ್ನೆ, ಜೀವನ್‌ ಮೆಂಡಿಸ್‌, ಆವಿಷ್ಕ ಫೆರ್ನಾಂಡೊ,ಜೆಫ್ರಿ ವಾಂಡರ್ಸೆ, ಮಿಲಿಂದ ಸಿರಿವರ್ಧನೆ ಈ ತಂಡದ ಅಚ್ಚರಿಯ ಆಯ್ಕೆಯಾಗಿದ್ದಾರೆ. ನಿರೋಷನ್‌ ಡಿಕ್ವೆಲ್ಲ ಬದಲು ಕುಸಲ ಪೆರೆರ ಕೀಪರ್‌ ಆಗಿ ನೇಮಕಗೊಂಡಿದ್ದಾರೆ. 4 ಮಂದಿ ಮೀಸಲು ಆಟಗಾರರನ್ನೂ ಆಯ್ಕೆ ಮಾಡಲಾಗಿದೆ. ಇವರೆಂ ದರೆ ಒಶಾದ ಫೆರ್ನಾಂಡೊ, ಕಸುನ್‌ ರಜಿತ, ವನಿಂದು ಹಸರಂಗ ಮತ್ತು ಏಂಜೆಲೊ ಪೆರೆರ.

ಶ್ರೀಲಂಕಾ ತಂಡ
ದಿಮುತ್‌ ಕರುಣರತ್ನೆ (ನಾಯಕ), ಆವಿಷ್ಕ ಫೆರ್ನಾಂಡೊ, ಲಹಿರು ತಿರಿಮನ್ನೆ, ಕುಸಲ್‌ ಪೆರೆರ, ಕುಸಲ್‌ ಮೆಂಡಿಸ್‌, ಧನಂಜಯ ಡಿ ಸಿಲ್ವ, ಜೀವನ್‌ ಮೆಂಡಿಸ್‌, ಮಿಲಿಂದ ಸಿರಿವರ್ಧನ, ಏಂಜೆಲೊ ಮ್ಯಾಥ್ಯೂಸ್‌, ತಿಸರ ಪೆರೆರ, ಇಸುರು ಉದಾ ನ, ಲಸಿತ ಮಾಲಿಂಗ, ಸುರಂಗ ಲಕ್ಮಲ್‌, ಜೆಫ್ರಿ ವಾಂಡರ್ಸೆ, ನುವಾನ್‌ ಪ್ರದೀಪ್‌.
ಮೀಸಲು ಆಟಗಾರರು: ಒಶಾದ ಫೆರ್ನಾಂಡೊ, ಕಸುನ್‌ ರಜಿತ, ವನಿಂದು ಹಸರಂಗ, ಏಂಜೆಲೊ ಪೆರೆರ.

 

Advertisement

Udayavani is now on Telegram. Click here to join our channel and stay updated with the latest news.

Next