Advertisement

ತಿಪಟೂರಿನಲ್ಲಿ ಗಣಿತ ಕಲಿಕಾ ಆಂದೋಲನ

06:03 PM Sep 24, 2019 | Suhan S |

ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮ ಪಂಚಾಯಿತಿ ಮಟ್ಟ ದಲ್ಲಿ ಅಕ್ಷರ ಫೌಂಡೇಶನ್‌ ವತಿಯಿಂದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕ್ಲಸ್ಟರ್‌ ವ್ಯಾಪ್ತಿಯ 12 ಶಾಲೆಯ 4, 5 ಮತ್ತು 6ನೇ ತರಗತಿ ಮಕ್ಕಳು ಭಾಗವಹಿಸಿದ್ದರು.

Advertisement

ಸ್ಪರ್ಧೆಯಲ್ಲಿ ಘಟಕಿನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿಗಳಾದ ಡಿ.ಆರ್‌. ರೀತು (ಪ್ರಥಮ), ಜಿ.ಎಂ. ಮಂಜುನಾಥ್‌ ಮತ್ತು ಜಿ. ಕವಿತಾ (ದ್ವಿತೀಯ), 4ನೇ ತರಗತಿ ವಿದ್ಯಾರ್ಥಿ  ಜಿ.ಎಚ್‌. ಪುನೀತ್‌ (ತೃತೀಯ) ಬಹುಮಾನ ಪಡೆದರು. ಒಟ್ಟು 9 ಬಹುಮಾನಗಳ ಪೈಕಿ 4

ಬಹುಮಾನ ಇದೇ ಶಾಲೆಯ ಮಕ್ಕಳು ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಪಿಡಿಒ ಶಿವಲಿಂಗಯ್ಯ, ಹಾಲ್ಕುರಿಕೆ ಶಾಲೆಯ ಮುಖ್ಯಶಿಕ್ಷಕ ಜಿ.ಆರ್‌. ಜಯರಾಮ್‌,ಫೌಂಡೇಶನ್‌ನ ರಘು, ಕ್ಲಸ್ಟರ್‌ ವ್ಯಾಪ್ತಿಯ ಶಿಕ್ಷಕರು, ಮಕ್ಕಳು, ಎಸ್‌ಡಿಎಂಸಿ ಸದಸ್ಯರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next