Advertisement

ಮಠ ಪಕ್ಷಕ್ಕೆ ಸೀಮಿತವಲ್ಲ

12:08 PM Apr 21, 2019 | Team Udayavani |

ಹುಬ್ಬಳ್ಳಿ: ಮೂರುಸಾವಿರ ಮಠ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಮಠಕ್ಕೆ ಬರುವ ಯಾವುದೇ ಪಕ್ಷದವರಿಗೂ ಸ್ವಾಮೀಜಿಯವರು ಒಳ್ಳೆಯದಾಗಲಿ ಎಂದು ಆಶೀರ್ವದಿಸುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.

Advertisement

ಮೂರುಸಾವಿರಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರುಸಾವಿರ ಮಠ ಪಕ್ಷವೊಂದಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂಬರ್ಥದಲ್ಲಿ ಕೆಲವರು ಬಿಂಬಿಸಿದ್ದರು. ಆದರೆ, ಶ್ರೀಮಠ ಅಂತಹ ಕಾರ್ಯ ಮಾಡುತ್ತಿಲ್ಲ. ಮಠಕ್ಕೆ ಬರುವವರಿಗೆ ಒಳ್ಳೆಯದಾಗಲಿ ಎಂದು ಸ್ವಾಮೀಜಿಯವರು ಹೇಳುತ್ತಾರೆ ವಿನಃ ಯಾವುದೇ ಪಕ್ಷ-ವ್ಯಕ್ತಿಗಳಿಗೆ ಪರವಾಗಿ ನಿಲ್ಲುವುದಿಲ್ಲ. ಶ್ರೀಮಠವು ಭಕ್ತರು ಹಾಗೂ ಸಮಾಜಕ್ಕೆ ಸೇರಿದ್ದಾಗಿದೆ. ಶ್ರೀಮಠಕ್ಕೆ ತಮ್ಮ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next