Advertisement

ವಿವಿಪ್ಯಾಟ್‌ನೊಂದಿಗೆ ಫ‌ಲಿತಾಂಶ ತಾಳೆ ಹಾಕಿ

12:30 AM Feb 05, 2019 | |

ಹೊಸದಿಲ್ಲಿ: ವಿದ್ಯುನ್ಮಾನ ಮತಯಂತ್ರಗಳ ಕಾರ್ಯವೈಖರಿ ಬಗ್ಗೆ ಎದ್ದಿರುವ ಅನುಮಾನಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜತೆಗೆ, ಮುಂಬರುವ ಲೋಕಸಭಾ ಚುನಾವಣೆಯ ನಂತರ, ಪ್ರತಿ ಕ್ಷೇತ್ರಗಳಲ್ಲಿ ವಿತರಣೆಯಾದ ಒಟ್ಟು ವಿವಿಪ್ಯಾಟ್‌ಗಳ ಶೇ. 50ರಷ್ಟನ್ನು ಫ‌ಲಿತಾಂಶದೊಂದಿಗೆ ತಾಳೆ ಹಾಕಿದ ಬಳಿಕವೇ ಫ‌ಲಿತಾಂಶ ಪ್ರಕಟಿಸುವ ಖಾತ್ರಿ ನೀಡಬೇ ಕೆಂದು ವಿರೋಧ ಪಕ್ಷಗಳ ನಾಯಕರ ನಿಯೋಗವೊಂದು ಕೇಂದ್ರ ಚುನಾವಣಾ ಆಯೋಗವನ್ನು (ಇಸಿಐ) ಆಗ್ರಹಿಸಿದೆ. 

Advertisement

ಇಸಿಐ ಕಚೇರಿಗೆ ಸೋಮವಾರ ಆಗಮಿಸಿದ ನಿಯೋಗದಲ್ಲಿ, ಗುಲಾಂ ನಬಿ ಆಜಾದ್‌, ಮಲ್ಲಿಕಾರ್ಜುನ ಖರ್ಗೆ, ಅಹ್ಮದ್‌ ಪಟೇಲ್‌, ಆನಂದ್‌ ಶರ್ಮಾ (ಕಾಂಗ್ರೆಸ್‌), ಚಂದ್ರಬಾಬು ನಾಯ್ಡು (ಟಿಡಿಪಿ), ಮಜೀದ್‌ ಮೆನನ್‌ (ಎನ್‌ಸಿಪಿ), ಡೆರೆಕ್‌ ಒಬ್ರಿಯಾನ್‌ (ಟಿಎಂಸಿ), ರಾಮ್‌ಗೊàಪಾಲ್‌ ಯಾದವ್‌ (ಎಸ್‌ಪಿ), ಸತೀಶ್‌ ಚಂದ್ರ ಮಿಶ್ರಾ (ಬಿಎಸ್‌ಪಿ) ಹಾಗೂ ಇತರರು ಇದ್ದರು. ಇತ್ತೀಚೆಗೆ, ಚುನಾವಣೆಯಲ್ಲಿ ಬ್ಯಾಲೆಟ್‌ ಆಧಾರಿತ ಮತದಾನ ಪದ್ಧತಿ ಜಾರಿಗೊಳ್ಳಬೇಕೆಂದು ವಿರೋಧ ಪಕ್ಷಗಳು ಮಾಡಿದ್ದ ಆಗ್ರಹವನ್ನು ಆಯೋಗ ತಳ್ಳಿಹಾಕಿತ್ತು. ಹಾಗಾಗಿ, ಪಕ್ಷಗಳು ಈಗ ಹೊಸ ಆಗ್ರಹವನ್ನು ಇಸಿಐ ಮುಂದಿಟ್ಟಿವೆ. 

Advertisement

Udayavani is now on Telegram. Click here to join our channel and stay updated with the latest news.

Next