Advertisement

ಮಾಸ್ತಿ ಪ್ರಶಸ್ತಿ ಪ್ರಕಟ

11:15 PM Jun 11, 2019 | Lakshmi GovindaRaj |

ಬೆಂಗಳೂರು: ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಟ್ರಸ್ಟ್‌ ನೀಡುವ ಪ್ರಸಕ್ತ ಸಾಲಿನ “ಮಾಸ್ತಿ ಪ್ರಶಸ್ತಿ’ ಪ್ರಕಟಿಸಲಾಗಿದ್ದು ಐವರು ಸಾಹಿತಿಗಳಿಗೆ ಈ ಪ್ರಶಸ್ತಿ ದೊರೆತಿದೆ. ಸಾಹಿತಿಗಳಾದ ಡಾ.ಕೆ.ಮರಳಸಿದ್ದಪ್ಪ (ವಿಮರ್ಶೆ), ಬೊಳುವಾರು ಮಹಮದ್‌ ಕುಂಞ (ಸೃಜನಶೀಲ), ಈಶ್ವರ್‌ಚಂದ್ರ (ಕಥೆ), ಸವಿತಾ ನಾಗಭೂಷಣ (ಕಾವ್ಯ), ಡಾ.ಮೊಗಳ್ಳಿ ಗಣೇಶ್‌ ಅವರು 2019ನೇ ಸಾಲಿನ ಮಾಸ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

ಪ್ರಶಸ್ತಿ 25 ಸಾವಿರ ನಗದು ಮತ್ತು ಫ‌ಲಕವನ್ನು ಒಳಗೊಂಡಿದೆ. ಜೂ. 29ರಂದು ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಟ್ರಸ್ಟ್‌ ಅಧ್ಯಕ್ಷ ಮಾವಿನಕೆರೆ ರಂಗನಾಥ್‌ ನೇತೃತ್ವದ ಆಯ್ಕೆ ಸಮಿತಿ ಈ ಆಯ್ಕೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next