Advertisement

ಡಿಕೆಶಿ ಪರ ಬೃಹತ್ ಸಮಾವೇಶ; ರಾಮನಗರದಿಂದ ರಾಜಭವನ ಚಲೋ, ಟ್ರಾಫಿಕ್ ಜಾಮ್

09:20 AM Sep 12, 2019 | Team Udayavani |

ಬೆಂಗಳೂರು: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬಂಧನ ಖಂಡಿಸಿ ರಾಜ್ಯ ಒಕ್ಕಲಿಗರ ಸಂಸ್ಥೆಗಳ ಒಕ್ಕೂಟ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ರಾಜಭವನ ಚಲೋ ನಡೆಸುತ್ತಿದೆ.

Advertisement

ಡಿಕೆ ಶಿವಕುಮಾರ್ ಬಂಧನ ಖಂಡಿಸಿ ರಾಮನಗರದಿಂದ ಬೆಂಗಳೂರಿನತ್ತ ಪ್ರತಿಭಟನಾಕಾರರು ಹೊರಟಿದ್ದು, ಇಂದಿನ ಪ್ರತಿಭಟನಾ ಸಮಾವೇಶದಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯ ಒಕ್ಕಲಿಗರ ಸಂಘ ತಿಳಿಸಿದೆ.

ಜಾರಿ ನಿರ್ದೇಶನಾಲಯ ಡಿಕೆಶಿಯನ್ನು ಬಂಧಿಸಿರುವುದನ್ನು ವಿರೋಧಿಸಿ ರಾಜ್ಯ ಒಕ್ಕಲಿಗರ ಸಂಘ ನೀಡಿರುವ ಬೃಹತ್ ಪ್ರತಿಭಟನಾ ರಾಲಿಯ ಹಿನ್ನೆಲೆಯಲ್ಲಿ ಹಾಸನ, ರಾಮನಗರ, ಕನಕಪುರ ಸೇರಿದಂತೆ ವಿವಿಧಡೆಯಿಂದ ಬೆಂಬಲಿಗರು, ಅಭಿಮಾನಿಗಳು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ.

ಈಗಾಗಲೇ ರಾಮನಗರ, ಕನಕಪುರ, ಸಾತನೂರು, ಮಾಗಡಿ ಸೇರಿದಂತೆ ಹಲವೆಡೆಯಿಂದ ಒಕ್ಕಲಿಗರು, ಕಾಂಗ್ರೆಸ್ ಕಾರ್ಯಕರ್ತರು ಬಸ್ ಗಳಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next