Advertisement

ಭಿವಂಡಿ ತೈಲ ಗೋದಾಮಿನಲ್ಲಿ ಭಾರೀ ಬೆಂಕಿ: ಜೀವ ಹಾನಿ ಇಲ್ಲ

12:23 PM Apr 02, 2018 | udayavani editorial |

ಥಾಣೆ : ಭಿವಂಡಿ ತಾಲೂಕಿನ ಗುಂಡಾವಳಿ ಗ್ರಾಮದಲ್ಲಿನ ತೈಲ ಆವರಣದೊಳಗೆ ನಿನ್ನೆ ರಾತ್ರಿ ತಡ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಹಲವು ತೈಲ ಗೋದಾಮುಗಳು ನಾಶವಾಗಿರುವುದಾಗಿ ವರದಿಯಾಗಿದೆ. 

Advertisement

ಬೆಂಕಿ ಕಾಣಿಸಿಕೊಂಡ ಕೂಡಲೇ ಆರು ಅಗ್ನಿ ಶಾಮಕಗಳು ಧಾವಿಸಿ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆಗೆ ತೊಡಗಿದವು. ಗಣೇಶ್‌ ಕಾಂಪೌಂಡ್‌ನ‌ಲ್ಲಿ ಕಾಣಿಸಿಕೊಂಡ ಬೆಂಕಿಯು ಆವರಣದೊಳಗಿನ ಹಲವು ತೈಲ ಗೋದಾಮುಗಳಿಗೆ ಹಬ್ಬಿಕೊಂಡಿತು. 

ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆಯಾದರೂ ಸೋಮವಾರ ಸಂಜೆಯ ವೇಳೆಗೆ ಬೆಂಕಿಯನ್ನು ಪೂರ್ತಿಯಾಗಿ ನಂದಿಸಲು ಸಾಧ್ಯವಾದೀತು ಎಂದು ಎಎನ್‌ಐ ವರದಿ ಮಾಡಿದೆ. 

ಬೆಂಕಿ ಅವಘಡ ಸಂಭವಿಸಿರುವ ಇಡಿಯ ಆವರಣವನ್ನು ಭದ್ರತಾ ದೃಷ್ಟಿಯಲ್ಲಿ ಪೊಲೀಸರು ಸುತ್ತು ವರಿದಿದ್ದಾರೆ.ಯಾವುದೇ ಜೀವ ಹಾನಿಯಾಗಿರುವ ವರದಿಗಳಲ್ಲಿ. ಸೊತ್ತು ನಾಶ-ನಷ್ಟದ ಪ್ರಮಾಣ ಇನ್ನಷ್ಟೇ ಗೊತ್ತಾಗಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next