Advertisement

BJP ಟಿಕೆಟ್‌ಗಾಗಿ ನೇಕಾರರಿಂದ ದೆಹಲಿಯಲ್ಲಿ ಭಾರಿ ಕಸರತ್ತು

05:19 PM Apr 09, 2023 | Team Udayavani |

ರಬಕವಿ-ಬನಹಟ್ಟಿ : ಬಿಜೆಪಿಯಿಂದ ಹಾಲಿ ಶಾಸಕ ಸಿದ್ದು ಸವದಿಯವರಿಗೆ ಟಿಕೆಟ್ ನೀಡದೆ ಸ್ಥಳೀಯ ನೇಕಾರ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ದೆಹಲಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿವಾಸದೆದುರು ಟಿಕೆಟ್‌ಗಾಗಿ ಭಾನುವಾರ ನೇಕಾರ ಮುಖಂಡರು ಹೋರಾಟ ನಡೆಸಿದರು.

Advertisement

ಸದ್ಯದಲ್ಲಿಯೇ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಹೈಕಮಾಂಡ್ ಮಟ್ಟದಲ್ಲಿ ಅಭ್ಯರ್ಥಿಗಳ ಹೆಸರು ತೆರಳಿದ್ದು, ಶೀಘ್ರವೇ ಶರಾ ಬರೆಯುವ ಕೊನೆಯ ಕ್ಷಣದವರೆಗೂ ನೇಕಾರ ಸಮುದಾಯದಿಂದ ಟಿಕೆಟ್‌ಗಾಗಿ ಹೋರಾಟ ನಿಂತಿಲ್ಲ. ಆ ನಿಟ್ಟಿನಲ್ಲಿ ದೆಹಲಿಯಲ್ಲಿಯೂ ನೇಕಾರರಿಗೆ ಟಿಕೇಟ್ ನೀಡುವಂತೆ ಒತ್ತಾಯಿಸಿದರು.

ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಐತಿಹಾಸಿಕ ಪೈಪೋಟಿ ಹೊಂದಿದ್ದು, ಬಿಜೆಪಿ ಅಭ್ಯರ್ಥಿ ಆಯ್ಕೆಯೇ ಒಂದು ಸವಾಲಾಗಿ ಕಾಡುತ್ತಿದೆ.
ನೇಕಾರ ನಿಯೋಗದಲ್ಲಿ ಟಿಕೆಟ್ ಆಕಾಂಕ್ಷಿ ರಾಜೇಂದ್ರ ಅಂಬಲಿ, ಹಟಗಾರ ಸಮಾಜದ ಜಿಲ್ಲಾಧ್ಯಕ್ಷ ಸೋಮನಾಥ ಗೊಂಬಿ, ರಾಮಣ್ಣ ಹುಲಕುಂದ, ಸೈಜಿಂಗ್ ಘಟಕದ ಅಧ್ಯಕ್ಷ ಬ್ರಿಜ್‌ಮೋಹನ ಡಾಗಾ, ಕುಮಾರ ಕದಂ, ಪ್ರವೀಣ ಕೋಲಾರ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next