Advertisement

ಶ್ರದ್ದಾಭಕ್ತಿಯಿಂದ ನಡೆದ ಸಾಮೂಹಿಕ ತಿಥಿಕಾರ್ಯ

01:10 PM Oct 04, 2021 | Team Udayavani |

ಶ್ರೀರಂಗಪಟ್ಟಣ: ಕೊರೊನಾದಿಂದ ಮೃತಪಟ್ಟಿದ್ದ ಸಾವಿರಕ್ಕೂ ಹೆಚ್ಚು ಅನಾಥ ಹೆಣಗಳ ಅಸ್ಥಿ ವಿಸರ್ಜನೆ ಮಾಡಿದ್ದ ಕಂದಾಯ ಇಲಾಖೆ ಇಂದು ಶ್ರೀರಂಗಪಟ್ಟಣದ ಗಂಜಾಮ್ ಸಮೀಪದ ಘೋಸಾಯ್ ಘಾಟ್ ನ ಕಾವೇರಿ ನದಿ ತಟದಲ್ಲಿ ಶ್ರದ್ದಾಭಕ್ತಿಯಿಂದ ಅನಾಥ ಹೆಣಗಳ ಅತ್ಮಕ್ಕೆ ಸಾಮೂಹಿಕ ತಿಥಿಕಾರ್ಯ ನಡೆಸಲಾಯಿತು.

Advertisement

ಶ್ರೀರಂಗಪಟ್ಟಣದ ಘೋಸಾಯ್ ಘಾಟ್ ನ ಕಾವೇರಿ ನದಿ ತೀರದಲ್ಲಿ ನಡೆದ ಸಾಮೂಹಿಕ ತಿಥಿ ಕಾರ್ಯವನ್ನು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಪಿಂಡ ಪ್ರದಾನ ಮಾಡಿ ಆತ್ಮಗಳಿಗೆ ಮುಕ್ತಿ ನೀಡಲಾಯಿತು.

ವೈದಿಕ ಪುರೋಹಿತ ಡಾ.ಭಾನುಪ್ರಕಾಶ್ ನೇತೃತ್ವದಲ್ಲಿ ಸಾಮೂಹಿಕ ತಿಥಿ ಕಾರ್ಯದ ವೈದಿಕ ಪೂಜಾ ಕೈಂಕರ್ಯಗಳು ನಡೆದವು ಅನಾಥ ಜನರ ಆತ್ಮಗಳಿಗೆ ಮುಕ್ತಿ ಕೋರಲಾಯಿತು.

ಸಾಮೂಹಿಕ ತಿಥಿ ಕಾರ್ಯಕ್ರಮದಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಡಿಸಿ ಅಶ್ವಥಿ, ಎಸಿ ಶೈಲಜಾ ಸೇರಿದಂತೆ ಹಲವರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next