Advertisement

ಮಾಸ್ಕ್ ಬಳಸಿ ಕೋವಿಡ್ -ಕ್ಷಯ ಮುಕ್ತಗೊಳಿಸಿ: ಲಿಂಗರಾಜು

06:26 AM Jun 19, 2020 | Suhan S |

ಕೊಪ್ಪಳ: ಮಾಸ್ಕ್ ಬಳಕೆ ಮಾಡಿ ಕೋವಿಡ್ ಮತ್ತು ಕ್ಷಯರೋಗ ಮುಕ್ತ ಸಮಾಜ ನಿರ್ಮಾಣ ಮಾಡೋಣ ಎಂದು ಡಿಎಚ್‌ಒ ಡಾ| ಲಿಂಗರಾಜು ಟಿ. ಹೇಳಿದರು.

Advertisement

ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಗುರುವಾರ ನಡೆದ ಮಾಸ್ಕ್ (ಮುಖಗವಸ) ದಿನಾಚರಣೆಯ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಾಸ್ಕ್ ಬಳಕೆಯಿಂದ ಕೋವಿಡ್ –ಕ್ಷಯ ಮುಕ್ತ ಸಮಾಜ ನಿರ್ಮಾಣ ಮಾಡವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು ಪ್ರಸ್ತುತ ಕೋವಿಡ್ ವೈರಸ್‌ ಖಾಯಿಲೆ ಹರಡಿದೆ. ಅದನ್ನು ಜಿಲ್ಲೆ ಮತ್ತು ದೇಶದಿಂದ ಮುಕ್ತ ಗೊಳಿಸಬೇಕಾದರೆ ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ| ಮಹೇಶ ಎಂ.ಜಿ ಮಾತನಾಡಿದರು. ಜಾಗೃತಿ ಜಾಥಾದಕ್ಕು ಆಶಾ, ಇಲಾಖೆಯ ಸಿಬ್ಬಂದಿ ವರ್ಗವು ಮಾಸ್ಕ್ ಧರಿಸುವ ಬಗ್ಗೆ ಘೋಷಣೆ ಕೂಗುತ್ತಾ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಡಾ| ಎಸ್‌.ಬಿ. ದಾನರೆಡ್ಡಿ, ಡಾ.ಜಂಬಯ್ಯ ಬಿ., ಡಾ| ವಿರುಪಾಕ್ಷರೆಡ್ಡಿ ಮಾದಿನೂರು, ಡಾ|ಗೌರಿಶಂಕರ, ಡಾ| ಎಸ್‌.ಕೆ ದೇಸಾಯಿ, ಡಾ| ಇರ್ಪಾನ್‌ ಅಂಜುಮ್‌, ಡಾ| ರಾಮಾಂಜನೇಯ, ನಾಗರಾಜ ಜುಮ್ಮನ್ನವರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next