Advertisement
ತಿಂಗಳೆ ಪ್ರತಿಷ್ಠಾನದಿಂದ ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಮಂಗಳವಾರ ನಡೆದ ತುಳುನಾಡ ಗರಡಿಗಳ ಎರಡನೇ ಮಹಾಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬೇಡಿಕೆಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮತ್ತು ಮುಖ್ಯಮಂತ್ರಿ ಅವರಲ್ಲಿ ಮಾತನಾಡುವೆ ಎಂದರು.
Related Articles
Advertisement
ಡಾ| ವೈ.ಎನ್. ಶೆಟ್ಟಿ, ಡಾ| ಅಶೋಕ್ ಆಳ್ವ, ಕೆ.ಎಲ್. ಕುಂಡಂತಾಯ ಸಂಯೋಜಿಸಿದರು.ಸಚಿವರನ್ನು ಸಮಿತಿ ಸಂಚಾಲಕ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಗೌರವಿಸಿದರು. ಸಮಿತಿ ಅಧ್ಯಕ್ಷ ಗುರ್ಮೆ ಸುರೇಶ ಶೆಟ್ಟಿ ಸ್ವಾಗತಿಸಿದರು. ನಂಬಿಕೆ-ಮೂಢನಂಬಿಕೆ !
ಭೂತಾರಾಧನೆ ಎನ್ನುವ ಬದಲು ದೈವಾರಾಧನೆ, ಬ್ರಹ್ಮಕಲಶ ಎನ್ನುವ ಬದಲು ಜೀರ್ಣೋ ದ್ಧಾರ ಎನ್ನಬೇಕು. ಕೋಟಿ ಚೆನ್ನಯರು ಸತ್ಯ, ಧರ್ಮ, ನ್ಯಾಯಕ್ಕಾಗಿ ಹೋರಾಡಿದವರು. ಈ ಹಿನ್ನೆಲೆಯಲ್ಲಿ ಸತ್ಯದ ಇತಿಹಾಸ, ಚರಿತ್ರೆಯನ್ನು ತಿರುಚುವುದು ಮಣ್ಣಿಗೆ ಮಾಡುವ ಅಪಚಾರ. ಕೊರಗ ಸಮುದಾಯದವರು ಕಲೆಯಿಂದ ದೂರ ಉಳಿಯಬಾರದೆಂದೇ ನಾನು ಆಳ್ವಾಸ್ ವಿರಾಸತ್, ನುಡಿಸಿರಿಯಲ್ಲಿ ಡೋಲು ಕಲೆಗೆ ಆದ್ಯತೆ ನೀಡಿದೆ. ಪರವ, ಪಂಬದ, ನಲ್ಕೆಯವರಿಗೆ ನಾನು ಎರಡು ವರ್ಷಗಳಿಂದ 500 ರೂ. ಮಾಸಾಶನ ನೀಡುತ್ತಿದ್ದೇನೆ. ಇವರಿಗೆ ಜೀವವಿಮೆ ಯೋಜನೆಯನ್ನೂ ಅಳವಡಿಸಬೇಕು. ಇವರ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡುವ ಜತೆ ದೈವಾರಾಧನೆಯ ಒಳಹೊರಗು ಕಲಿಸಬೇಕು ಎಂದು ಡಾ| ಎಂ. ಮೋಹನ ಆಳ್ವ ಹೇಳಿದರು.