Advertisement

ಟ್ರೈಬ್ಸ್ ಇಂಡಿಯಾ: ಮೇರಿ ರಾಯಭಾರಿ

06:00 AM Sep 28, 2018 | Team Udayavani |

ಹೊಸದಿಲ್ಲಿ: ಐದು ಬಾರಿಯ ವಿಶ್ವ ಚಾಂಪಿಯನ್‌ ಬಾಕ್ಸರ್‌ ಎಂ.ಸಿ. ಮೇರಿ ಕೋಮ್‌ ಅವರನ್ನು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ನೇತೃತ್ವದ “ಟ್ರೈಬ್ಸ್ ಇಂಡಿಯಾ’ ಅಭಿಯಾನಕ್ಕೆ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. 

Advertisement

“ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯಕ್ಕೆ ನಾನು ರಾಯಭಾರಿಯಾಗಿರುವುದು ಖುಷಿ ತಂದಿದೆ. ನಾನು ಮಣಿಪುರದವಳು ಹಾಗೂ ಟ್ರೈಬ್ಸ್ ಇಂಡಿಯಾದ ಸಹಯೋಗದೊಂದಿಗೆ ಬುಡಕಟ್ಟು ಜನಾಂಗದಲ್ಲಿ ಆರ್ಥಿಕವಾಗಿ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತೇನೆ. ಬುಡುಕಟ್ಟು ಜನಾಂಗದ ಜನರು ಮುನ್ನೆಲೆಗೆ ಬರುತ್ತಾರೆ ಎಂದು ನಂಬಿದ್ದೇನೆ’ ಎಂದು ಮೇರಿ ಕೋಮ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next