Advertisement

ದಕ್ಷಿಣ್‌ ಡೇರ್‌ ರ್ಯಾಲಿ ಆರಂಭ

10:00 AM Jul 19, 2017 | Team Udayavani |

ಬೆಂಗಳೂರು: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ ಆಯೋಜಿಸಿರುವ ದಕ್ಷಿಣ್‌ ಡೇರ್‌ ರ್ಯಾಲಿಗೆ ಬೆಂಗಳೂರಿನ ಒರಿಯನ್‌ ಮಾಲ್‌ನಲ್ಲಿ ಚಾಲನೆ ನೀಡಲಾಯಿತು. ರೇಸ್‌ನಲ್ಲಿ ಒಟ್ಟು 180 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ, ಕಡಿದಾದ ಪ್ರದೇಶದಲ್ಲಿ ರೋಚಕ ರ್ಯಾಲಿ ಜನರನ್ನು ಹೆಚ್ಚು ರಂಜಿಸಲಿದೆ. ಬೆಂಗಳೂರಿನಿಂದ ಆರಂಭವಾದ ರ್ಯಾಲಿ ಚಿತ್ರದುರ್ಗ, ಬೆಳಗಾವಿ, ಕೊಲ್ಹಾಪುರ ಮೂಲಕ ಸಾಗಿ ಪುಣೆಯಲ್ಲಿ ಅಂತ್ಯವಾಗಲಿದೆ.

Advertisement

ರೇಸ್‌ನ ಮೊದಲ ದಿನ 463 ಕಿ.ಮೀ. ಕ್ರಮಿಸುವ ಗುರಿ ನೀಡಲಾಗಿತ್ತು. ಮಾರುತಿ ಸುಜುಕಿ ತಂಡದ ಸಮರ್ಥ್ ಯಾದವ್‌-ನ್ಯಾವಿಗೇಟರ್‌ ಎಸ್‌.ಎನ್‌. ನಿಝಾಮಿ ಒಳಗೊಂಡ ತಂಡ 2 ಗಂಟೆ, 45 ನಿಮಿಷ, 26 ಸೆಕೆಂಡ್ಸ್‌ ಗಳಲ್ಲಿ ಗುರಿ ತಲುಪಿ ಮುನ್ನಡೆ ಸಾಧಿಸಿದರು. ಮಾರುತಿ ಸುಜುಕಿ ಮತ್ತೂಂದು  ತಂಡದ ಸಂದೀಪ್‌ ಶರ್ಮಾ- ನ್ಯಾವಿಗೇಟರ್‌ ಕರಣ್‌ ಆರ್ಯ  2 ಗಂಟೆ, 46 ನಿಮಿಷ, 12 ಸೆಕೆಂಡ್ಸ್‌ಗಳಲ್ಲಿ ಗುರಿ ಪೂರೈಸಿ ದ್ವಿತೀಯ ಸ್ಥಾನ ಪಡೆದರು.

ಜುಲೈ 22ರಂದು ಪುಣೆಯಲ್ಲಿ ರ್ಯಾಲಿ ಅಂತ್ಯಗೊಳ್ಳಲಿದ್ದು, ಅಂದು ವಿಜೇತರಿಗೆ ಪ್ರಶಸ್ತಿ ನೀಡಲಾಗುವುದು. ಎಂಡ್ಯುರೆನ್ಸ್‌, ಅಲ್ಟಿಮೆಟ್‌ ಕಾರ್‌ ಹಾಗೂ ಅಲ್ಟಿಮೆಟ್‌ ಬೈಕ್‌ ಮೂರು ವಿಭಾಗದಲ್ಲಿ ರೇಸ್‌ ನಡೆಯಲಿದೆ. ಒಟ್ಟು 6 ದಿನ, 2 ಸಾವಿರ ಕಿ.ಮೀ. ಕ್ರಮಿಸುವ ಗುರಿಯನ್ನು ನೀಡಲಾಗಿದೆ. 

ದಕ್ಷಿಣ್‌ ಡೇರ್‌ ರ್ಯಾಲಿಗೆ ಚಾಲನೆ ದೊರಕಿದ ಬಳಿಕ ಸಂಸ್ಥೆಯ  ವಾಣಿಜ್ಯ ಉದ್ಯಮ ಮುಖ್ಯಸ್ಥ ಆನಂದ್‌ ಪ್ರಕಾಶ್‌ ಮಾತನಾಡಿದರು. ಪ್ರತಿ ವರ್ಷವೂ ಚಾಲಕರನ್ನು ಹೊಸ ಹುಮ್ಮಸ್ಸಿನೊಂದಿಗೆ ಬೆಂಬಲಿಸುವುದು ಖುಷಿಯ ವಿಚಾರ. ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚು ರೋಚಕವಾಗಿ ರೇಸ್‌ ನಡೆಯಲಿದೆ. ದಕ್ಷಿಣದ ಕಡಿದಾದ ಪ್ರದೇಶಗಳಲ್ಲಿ ಕಾರ್‌ ಚಾಲನೆ ಮಾಡುವುದು ಸವಾರರಿಗೆ ಹೊಸ ಅನುಭವ ನೀಡಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next