Advertisement
ನಾಗಪುರದಿಂದ ಪುಣೆವರೆಗೆ ವಿಮಾನ ಮೂಲಕ ಹಾಗೂ ಪುಣೆಯಿಂದ ಧಾರವಾಡವರೆಗೆ ವಾಹನದ ಮೂಲಕ ಯೋಧನ ಪಾರ್ಥಿವ ಶರೀರವನ್ನು ತರಲಾ ಯಿತು. ನಗರದ ಆರ್.ಎನ್.ಶೆಟ್ಟಿ ಮೈದಾನದ ಮುಂಭಾಗ ಬೆಳಗ್ಗೆ 11:00 ಗಂಟೆಗೆ ಆಗಮಿಸಿದ ಪಾರ್ಥಿವಶರೀರವನ್ನು ಜಿಲ್ಲಾಡಳಿತ ಬರಮಾಡಿಕೊಂಡು ಗೌರವ ಸಲ್ಲಿಸಿತು. ಮಧ್ಯಾಹ್ನ 12:00 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಪ್ರೌಢಶಾಲೆ ಆವರಣದಲ್ಲಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಗ್ರಾಮದ ಹೊರವಲಯದ ರುದ್ರಭೂಮಿಯಲ್ಲಿ ಸಿಆರ್ ಪಿಎಫ್ ಯೋಧರು ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಿದರು. 25 ಲಕ್ಷ ರೂ. ಪರಿಹಾರ ಘೋಷಣೆ
ಬೆಂಗಳೂರು: ನಕ್ಸಲರ ಗುಂಡಿನ ದಾಳಿಗೆ ಹುತಾತ್ಮರಾದ ಧಾರವಾಡ ಜಿಲ್ಲೆ ಮನಗುಂಡಿ ಗ್ರಾಮದ ವೀರ ಯೋಧ ಮಂಜುನಾಥ ಜಕ್ಕನ್ನವರ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ 25 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.