Advertisement

ಆಂಧ್ರ ಉದ್ಯಮಿ ಪುತ್ರಿ ಜೊತೆ ವಿವಾಹ?

11:11 AM Sep 02, 2018 | |

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್‌ ಕುಮಾರ್‌ಗೆ ಹೆಣ್ಣು ಹುಡುಕುತ್ತಿದ್ದಾರಂತೆ, ಈಗಾಗಲೇ ಆಂಧ್ರದಲ್ಲಿ ನೆಲೆಸಿರುವ ಕರ್ನಾಟಕ  ಮೂಲದ ಉದ್ಯಮಿಯೊಬ್ಬರ ಮಗಳನ್ನು ನೋಡಿಕೊಂಡು ಬಂದಿದ್ದಾರಂತೆ, ಎಲ್ಲವೂ ಅಂದುಕೊಂಡಂತೆ ಆದರೆ ಸದ್ಯದಲ್ಲೇ ಮದುವೆ ನಡೆಯಲಿದೆಯಂತೆ…  ನಿಖಿಲ್‌ ಸುತ್ತ ಈ ತರಹದ ಒಂದು ಸುದ್ದಿ ಜೋರಾಗಿ ಕೇಳಿಬರಲಾರಂಭಿಸಿದೆ.

Advertisement

ಹೈದರಾಬಾದ್‌ನ ಉದ್ಯಮಿ ಕೋಟೇಶ್ವರ್‌ ರಾವ್‌ ಅವರ ಪುತ್ರಿಯನ್ನು ನಿಖಿಲ್‌  ಮದುವೆಯಾಗಲಿದ್ದು, ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಆಂಧ್ರಪ್ರದೇಶಕ್ಕೆ ತೆರಳಿ, ಕೋಟೇಶ್ವರ ರಾವ್‌ ಅವರ ಮನೆಗೆ ಭೇಟಿ  ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿವೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, “ನಾನು ನಿಖಿಲ್‌ಗೆ ಹೆಣ್ಣು ಹುಡುಕುವ ಸಲುವಾಗಿ ಬಂದಿಲ್ಲ.

ಕೋಟೇಶ್ವರ್‌ ರಾವ್‌ ನನ್ನ ಆತ್ಮೀಯ ಸ್ನೇಹಿತರು. ಹಾಗಾಗಿ, ಅವರನ್ನು ಭೇಟಿಯಾಗಿದ್ದೆ ಅಷ್ಟೇ’ ಎಂದಿದ್ದಾರೆ. ಈ ಮೂಲಕ ನಿಖಿಲ್‌ ಮದುವೆ ಸಲುವಾಗಿ ಆಂಧ್ರಪ್ರದೇಶಕ್ಕೆ ತೆರಳಿದ್ದಾಗಿ ಹಬ್ಬಿದ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ಮಾಧ್ಯಮವದರ ಪ್ರಶ್ನೆಗೆ ಉತ್ತರಿಸಿದ ಮಾಜಿ  ಪ್ರಧಾನಿ ಎಚ್‌.ಡಿ.ದೇವೇಗೌಡ, “ಅದು ಅವರ ವೈಯಕ್ತಿಕ ವಿಚಾರ.

ಹುಡುಗಿ ಒಪ್ಪಿದರೆ ಮದುವೆ ಮಾಡಿಸೋಣ’ ಎಂದಿದ್ದಾರೆ. “ಸೀತಾರಾಮ ಕಲ್ಯಾಣ’  ಚಿತ್ರದ ಕಾರ್ಯಕಾರಿ ನಿರ್ಮಾಪಕ ಹಾಗೂ ನಿಖಿಲ್‌ ಆಪ್ತ ವಲಯದಲ್ಲಿರುವ ಸುನೀಲ್‌, “ನಿಖಿಲ್‌ ಮದುವೆಗೆ ಹುಡುಗಿ ಹುಡುಕುತ್ತಿರೋದು ನಿಜ. ಆದರೆ,  ಹೈದರಾಬಾದ್‌ಗೆ ಹೋಗಿರುವುದಕ್ಕೂ ಮದುವೆ ವಿಚಾರಕ್ಕೂ ಸಂಬಂಧವಿಲ್ಲ’ ಎಂದಿದ್ದಾರೆ.

ಸದ್ಯ ನಿಖಿಲ್‌ ಕುಮಾರ್‌ “ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ  ಬಿಝಿಯಾಗಿದ್ದು, ಸದ್ಯ ಊಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ನಡುವೆಯೇ ಅವರು ಕನ್ನಡದ ಅದ್ಧೂರಿ ಬಜೆಟ್‌ನ ಹಾಗೂ ಬಹುತಾರಾಗಣದ “ಕುರುಕ್ಷೇತ್ರ’ ಚಿತ್ರದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದು, ಆ ಚಿತ್ರ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next