Advertisement

ಮರ್ಕಂಜ: ನಾಪತ್ತೆಯಾಗಿದ್ದ ಮಹಿಳೆ ಸುಳ್ಯ ಠಾಣೆ ಹಾಜರು

11:04 PM Jan 24, 2023 | Team Udayavani |

ಅರಂತೋಡು: ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ನವವಿವಾಹಿತೆ ಮರ್ಕಂಜ ಗ್ರಾಮದ ರಾಜಶೇಖರ ಅವರ ಪತ್ನಿ ಕೀರ್ತಿಶ್ರೀ ಪತ್ತೆಯಾಗಿದ್ದಾರೆ.

Advertisement

ಕೀರ್ತಿಶ್ರೀ ಕಾಣೆಯಾಗಿರುವುದಾಗಿ ಆಕೆಯ ಪತಿ ಸುಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ರವಿ ವಾರ ರಾತ್ರಿ ಸುಳ್ಯ ಪೊಲೀಸ್‌ ಠಾಣೆಗೆ ಹಾಜರಾದ ಕೀರ್ತಿಶ್ರೀ ತನ್ನ ತಾಯಿಯ ಮನೆಗೆ ಹೋಗಿದ್ದಾಗಿ ಹೇಳಿದ ಹಿನ್ನೆಲೆಯಲ್ಲಿ ಮನೆಯವರನ್ನು ಕರೆಸಿ ಅವರೊಂದಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

ಜ. 21ರಂದು ಆರೋಗ್ಯ ಸರಿ ಇಲ್ಲವೆಂದು ಕೀರ್ತಿಶ್ರೀ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಅವರ ಪತಿ ಮನೆಯಿಂದ ಜೀಪಿನಲ್ಲಿ ಬೆಳಗ್ಗೆ 10ಕ್ಕೆ ಕರೆದುಕೊಂಡು ಹೋಗಿದ್ದು ಬಳಿಕ ಎಲಿಮಲೆಯ ಕ್ಲಿನಿಕ್‌ ಗೆ ಹೋಗುವುದಕ್ಕೆ ಬಸ್‌ ಹತ್ತಿಸಿದ್ದರು. 10.30ಕ್ಕೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಬಳಿಕ ಎಲ್ಲ ಕಡೆ, ಆಕೆಯ ಸಂಬಂಧಿಕರ ಮನೆಗಳಲ್ಲಿಯೂ ವಿಚಾರಿಸಿದಾಗ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಹೀಗಾಗಿ ಸುಳ್ಯ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು.

ಇದನ್ನೂ ಓದಿ: ಮದ್ದೂರು ತಾಲೂಕು ಕಚೇರಿ ಹೊರ ಆವರಣದಲ್ಲಿ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next