Advertisement

ಮರವಂತೆ ಮೀನುಗಾರರಿಂದ ಸಮುದ್ರ ಪೂಜೆ

09:55 PM Jul 15, 2019 | Team Udayavani |

ಉಪ್ಪುಂದ: ಮರವಂತೆ ಕರಾವಳಿ ತೀರದ ಸಮಸ್ತ ಮೀನುಗಾರರ ವತಿಯಿಂದ ಹೊರ ಬಂದರು ಪ್ರದೇಶದಲ್ಲಿ ಸಮುದ್ರ ಪೂಜೆ ನಡೆಸಲಾಯಿತು.

Advertisement

ಚಂದ್ರಹಾಸ ಅವರು ವಿವಿಧ ಪೂಜಾ ವಿಧಿ ವಿಧಾಗಳನ್ನು ನೆರವೇರಿಸಿದರು.
ಸಮುದ್ರ ಪೂಜೆಯ ಪೂರ್ವದಲ್ಲಿ ಊರಿನ ಎಲ್ಲ ಗ್ರಾಮದ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಮೀನುಗಾರರು ಮಳೆಗಾಲದಲ್ಲಿ ಆರಂಭವಾಗುವ ಹೊಸ ಮೀನುಗಾರಿಕೆಯಲ್ಲಿ ಸುರಕ್ಷಿತ ಹಾಗೂ ಸಮೃದ್ಧ ಮೀನುಗಾರಿಕೆ ಕರುಣಿಸುವಂತೆ ಮೀನುಗಾರರು ಪ್ರಾರ್ಥನೆ ಸಲ್ಲಿಸಿ ಸಮುದ್ರರಾಜನಿಗೆ ಹಾಲು, ಹಣ್ಣು, ಹೂ ಅರ್ಪಿಸಿ ಸಮುದ್ರ ಪೂಜೆ ನೆರವೇರಿಸಲಾಯಿತು.

ಮುಖಂಡ ಮೋಹನ ಖಾರ್ವಿ, ವೆಂಕಟರಮಣ ಖಾರ್ವಿ, ಚಂದ್ರ ಖಾರ್ವಿ, ಶಂಕರ ಖಾರ್ವಿ, ಲಕ್ಷ್ಮಣ ಖಾರ್ವಿ, ಸತೀಶ ಖಾರ್ವಿ, ಚಂದ್ರ ಖಾರ್ವಿ, ವಾಸುದೇವ ಖಾರ್ವಿ ಹಾಗೂ ಊರಿನ ಸಮಸ್ತ ಮೀನುಗಾರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next