Advertisement

ಕಲಬುರಗಿಯಲ್ಲಿ ಮುಂದುವರೆದ ಗಾಂಜಾ ಬೇಟೆ: ಚಿಂಚೋಳಿಯಲ್ಲಿ ಮತ್ತೆ 62 ಕೆಜಿ ಗಾಂಜಾ ಜಪ್ತಿ

06:58 PM Sep 12, 2020 | sudhir |

ಚಿಂಚೋಳಿ (ಕಲಬುರಗಿ): ತಾಲೂಕಿನಲ್ಲಿ ಗಾಂಜಾ ವಿರುದ್ಧ ಪೊಲೀಸರು ಕರ‍್ಯಾಚರಣೆ ಮುಂದುವರೆಸಿದ್ದು, ಸಲಗರ ಬಸಂತಪೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಧರಿ ತಾಂಡಾದಲ್ಲಿ ದಾಳಿ ಮಾಡಿ ಮನೆಯ ಮುಂದೆ ಹಾಗೂ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 62 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.

Advertisement

2.50 ಲಕ್ಷ ರೂ. ಮೌಲ್ಯದ 1 ಕೆಜಿ ಒಣ ಗಾಂಜಾ ಮತ್ತು 61 ಕೆಜಿ ಹಸಿ ಗಾಂಜಾವನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಧರಿತಾಂಡಾದ ಆರೋಪಿ ಧನಸಿಂಗ ರಾಮಚಂದ್ರ ರಾಠೋಡ ಎಂಬಾತ ತನ್ನ ಮನೆ ಮುಂದೆ ಹಾಗೂ ಮನೆ ಹಿಂದೆ ಇರುವ ಜಮೀನುದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಚಿಂಚೋಳಿ ಡಿವೈಎಸ್ಪಿ ಈ.ಎಸ್.ವೀರಭದ್ರಯ್ಯ, ಸಿಪಿಐ ಮಹಾಂತೇಶ ಪಾಟೀಲ ಮರ‍್ಗರ‍್ಶನದಲ್ಲಿ ಚಿಂಚೋಳಿ ಠಾಣೆ ಪಿಎಸ್‍ಐ ರಾಜಶೇಖರ ರಾಠೋಡ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಧನಸಿಂಗ ರಾಮಚಂದ್ರ ರಾಠೋಡ ಪೊಲೀಸರು ಬರುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳದಿಂದ ಪರಾರಿಯಾಗಿದ್ದಾನೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶುಕ್ರವಾರ 38 ಕೆ.ಜಿ. ಹಾಗೂ ಕಳೆದ ವಾರ 88 ಕೆಜಿ ಗಾಂಜಾವನ್ನು ಚಿಂಚೋಳಿ ಪೊಲೀಸರು ಜಪ್ತಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next