Advertisement

Mangaluru: ಗಾಂಜಾ ಸೇವನೆ: ಯುವಕನ ಬಂಧನ

07:22 PM Aug 18, 2024 | Team Udayavani |

ಮಂಗಳೂರು: ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಯುವಕನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

Advertisement

ಆ.16ರಂದು ಪೊಲೀಸರು ರೌಂಡ್ಸ್‌ ಮಾಡುತ್ತಿದ್ದಾಗ ರಾತ್ರಿ ಬಿಜೈ ಆನೆಗುಂಡಿ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಯುವಕನೊಬ್ಬ ಸಿಗರೇಟು ಸೇದುತ್ತಾ ಅನುಮಾನಾಸ್ಪದವಾಗಿ ನಿಂತಿದ್ದ. ಆತನನ್ನು ವಿಚಾರಿಸಿದಾಗ ಆತ ಕೇರಳದ ಸುಲೈಮಾನ್‌ ಅಶ್ರಫ್(23) ಎಂದು ತಿಳಿಸಿದ್ದಾನೆ. ಆತನ ಮಾತು ತೊದಲುತ್ತಿದ್ದು ಬಾಯಿಯಿಂದ ನಿಷೇಧಿತ ಮಾದಕ ವಸ್ತುವಿನ ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಿಸಿದಾಗ ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next