Advertisement

ರಾಜ್ಯ ರಾಜಧಾನಿಯ ಮೂರು ಕಡೆಗಳಲ್ಲಿ ಸರಗಳ್ಳತನ

11:42 AM Jan 15, 2018 | |

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮತ್ತೆ ಹೆಚ್ಚಾಗಿದ್ದು, ಸೋಮವಾರ ಬೆಳಿಗ್ಗೆ ನಗರದ 3 ಕಡೆಗಳಲ್ಲಿ ತಮ್ಮ ಕೈ ಚಳಕ ತೋರಿದ್ದಾರೆ.

Advertisement

ಪೀಣ್ಯದ  2ಕಡೆ ಹಾಗೂ ಬಾಗಲಗುಂಟೆಯಲ್ಲಿ ಸರಗಳ್ಳತನ ಮಾಡಿ ಪರಾರಿಯಾಗಿದಾದ್ದರೆ. ಬಾಗಲಗುಂಟೆಯಲ್ಲಿ ಸೌಂಗಧಿಕ ಎಂಬುವವರ ಚಿನ್ನದ ಸರವನ್ನು ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪೀಣ್ಯ ಎಚ್‌ಎಂಟಿ ಲೇಔಟ್‌ನಲ್ಲಿ ನ್‌ಪೆಕ್ಟರ್‌ ಪತ್ನಿ ಗಂಗಮ್ಮ ಅವರು ಮನೆ ಮುಂದೆ ನೀರು ಹಾಕಿ ಮನೆ ಒಳಗೆ ಬರುವಾಗ ಹಿಂಬದಿಯಿಂದ ಬಂದ ಕಳ್ಳ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.

ಆರೋಪಿಗಳಿಗಾಗಿ ಪೀಣ್ಯ, ಬಾಗಲಗುಂಟೆ ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next