Advertisement

Ayodhya: ಡಿ.15ರಂದು ತಲುಪಲಿದೆ ಅಮೃತಶಿಲೆಯ ಸಿಂಹಾಸನ- ಗರ್ಭಗುಡಿ ದ್ವಾರಕ್ಕೆ ಚಿನ್ನಲೇಪನ

12:44 AM Nov 11, 2023 | Team Udayavani |

ಲಕ್ನೋ: ಶ್ರೀರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆ ಸಜ್ಜುಗೊಂಡಿರುವ ನಡುವೆಯೇ ಮಂದಿರದ ನಿರ್ಮಾಣ ಕಾರ್ಯಗಳೂ ಬಿರುಸಾಗಿ ನಡೆಯುತ್ತಿದ್ದು, ಇದೀಗ ದೇಗುಲದ ಗರ್ಭಗುಡಿಯ ಬಾಗಿಲುಗಳಿಗೆ ಚಿನ್ನಲೇಪಿಸುವ ಕಾರ್ಯ ಆರಂಭಗೊಂಡಿದೆ.

Advertisement

ಈ ಕುರಿತಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಮಾಹಿತಿ ನೀಡಿದ್ದು, ಗರ್ಭಗುಡಿಯ ಬಾಗಿಲುಗಳಿಗೆ ಚಿನ್ನ ಲೇಪಿಸಲಾಗುತ್ತಿದೆ. ಜೈ ಶ್ರೀರಾಮ್‌ ಘೋಷಣೆ ಮೂಲಕ ಬಾಗಿಲುಗಳನ್ನು ಎತ್ತಿ ನಿಲ್ಲಿಸಿ ಕಾರ್ಯಾರಂಭ ಮಾಡಲಾಗಿದೆ. ಈ ತಿಂಗಳಲ್ಲೇ ಲೇಪನ ಪೂರ್ಣಗೊಳ್ಳಲಿದೆ. ಪ್ರತೀ ಅಂತಸ್ತಿನಲ್ಲಿ 18 ಬಾಗಿಲುಗಳು ಇರಲಿದ್ದು, ಗರ್ಭಗುಡಿಯ ಬಾಗಿಲುಗಳು ಅತೀ ದೊಡ್ಡದಾಗಿವೆ. ರಾಮಲಲ್ಲಾನ ವಿಗ್ರಹವನ್ನು ಕೂರಿಸುವು ದಕ್ಕಾಗಿ ರಾಜಸ್ಥಾನದಲ್ಲಿ 8 ಅಡಿ ಎತ್ತರದ ಅಮೃತಶಿಲೆಯ ಸಿಂಹಾಸನವನ್ನು ಕೆತ್ತಲಾಗಿದೆ. ಅದಕ್ಕೂ ಚಿನ್ನ ಲೇಪಿಸಲಾಗುವುದು ಮತ್ತು ಸಿಂಹಾಸನ ಡಿ.15ರಂದು ಅಯೋಧ್ಯೆ ತಲುಪಲಿದೆ ಎಂದು ಟ್ರಸ್ಟ್‌ ಹೇಳಿದೆ.

ಯೋಗಿಗೆ ಆಮಂತ್ರಣ: ಜ.22ರಂದು ನಡೆಯಲಿರುವ ಮಂದಿರ ಉದ್ಘಾಟನೆಗೆ ಶುಕ್ರವಾರ ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಆಮಂತ್ರಣ ನೀಡಲಾಗಿದೆ. ಈ ಬಗ್ಗೆ ಯೋಗಿ ಟ್ವೀಟ್‌ ಮಾಡಿದ್ದು, ಇದನ್ನು ಸ್ವೀಕರಿಸಿ ರುವುದು ನನ್ನ ಪುಣ್ಯ ಎಂದು ಹೇಳಿಕೊಂಡಿದ್ದಾರೆ.

ನೀವೂ ಹಣತೆ ಬೆಳಗಿಸಿ!
ಅಯೋಧ್ಯೆಯಲ್ಲಿ ಗುರುವಾರದಿಂದಲೇ ದೀಪೋ ತ್ಸವ ಆರಂಭವಾಗಿದ್ದು, ಈ ಬಾರಿ 51 ಘಾಟ್‌ಗಳಲ್ಲಿ 24 ಲಕ್ಷ ದೀಪಗಳನ್ನು ಬೆಳಗಿಸಲು ಉದ್ದೇಶಿಸ ಲಾಗಿದೆ. ಇದರೊಂದಿಗೆ ವರ್ಚುವಲ್‌ ದೀಪೋತ್ಸವ ಕ್ಕೂ ಅನುವು ಮಾಡಿಕೊಡಲಾಗಿದ್ದು, ಬೇರೆಡೆ ಇರುವ ರಾಮಭಕ್ತರು ವರ್ಚುವಲ್‌ ಆಗಿಯೇ ಅಯೋಧ್ಯೆಯ ಘಾಟ್‌ಗಳಲ್ಲಿ ದೀಪ ಬೆಳಗಿಸ ಬಹುದು. https://holyayodhya.com/ ಈ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ನಮಗೆ ಬೇಕಾದ ಘಾಟ್‌ ಆಯ್ಕೆ ಮಾಡಿ ಬೇಕಾದ ಸ್ಥಳದಲ್ಲಿ ದೀಪ ಬೆಳಗಿಸಬಹುದು. ಅದಕ್ಕಾಗಿ ಒಂದು ದೀಪಕ್ಕೆ 51 ರೂ., 11 ದೀಪಗಳಿಗೆ 101 ರೂ, 51 ದೀಪಗಳಿಗೆ 1,100ರೂ. ನಿಗದಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next