Advertisement

ಮರವಂತೆಯಲ್ಲಿ ಕಡಲ್ಕೊರೆತ: ತೀರದ ನಿವಾಸಿಗರಲ್ಲಿ ಆತಂಕ

02:28 AM Apr 29, 2021 | Team Udayavani |

ಕುಂದಾಪುರ : ಮರವಂತೆಯ ಕಡಲ ತೀರದಲ್ಲಿ ಬುಧವಾರ ಮಧ್ಯಾಹ್ನದ ಸುಮಾರಿಗೆ ಕಡಲ್ಕೊರೆತ ಆರಂಭಗೊಂಡಿದ್ದು, ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ತೀರದ ನಿವಾಸಿಗರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.

Advertisement

ಹೊರ ಬಂದರಿನ ಬ್ರೇಕ್‌ವಾಟರ್‌ ಬಳಿಯ ಕೇಮು ಮನೆ ಸಮೀಪ ಅಲೆಗಳು ದಡಕ್ಕೆ ಅಪ್ಪಳಿಸುತ್ತಿರುವುದರಿಂದ ಮೀನುಗಾರಿಕಾ ರಸ್ತೆಗೂ ಅಪಾಯ ಎದು ರಾಗಿದೆ. 50ಕ್ಕೂ ಹೆಚ್ಚು ಮನೆಗಳ ಜನರು ಭೀತಿಯಲ್ಲಿದ್ದಾರೆ.

ಶಾಸಕರ ಭೇಟಿ
ಕಡಲ್ಕೊರೆತ ಪ್ರದೇಶಕ್ಕೆ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಭೇಟಿ ನೀಡಿ ಸ್ಥಳೀಯರ ಅಹವಾಲುಗಳನ್ನು ಆಲಿಸಿದರು. ತಹಶೀಲ್ದಾರ್‌ಕಿರಣ್‌ ಗೌರಯ್ಯ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭಾರತಿ, ತಾ.ಪಂ. ಸದಸ್ಯ ಜಗದೀಶ್‌
ಪೂಜಾರಿ, ಮರವಂತೆ ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಲೋಕೇಶ್‌ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next