ಮರವಂತೆ: ಮರವಂತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಚತುಷ್ಪಥ ರಸ್ತೆ ಬದಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು ವಾಹನ ಸವಾರರಲ್ಲಿ ಭೀತಿ ಮೂಡಿಸಿವೆ.
ಬೈಂದೂರಿನಿಂದ ಕುಂದಾಪುರದ ಕಡೆಗೆ ಸಾಗುವಾಗ ಚತುಷ್ಪಥ ಹೆದ್ದಾರಿಗಾಗಿ ಸೌಪರ್ಣಿಕಾ ನದಿಗೆ ನಿರ್ಮಿಸಿರುವ ನೂತನ ಸೇತುವೆಯ ಸಂಪರ್ಕ ರಸ್ತೆ ಬದಿಗೆ ತುಂಬಿಸಿರುವ ಮಣ್ಣು ಆರಂಭದ ಮಳೆಗೆ ಬಿರುಕು ಬಿಟ್ಟಿತ್ತು.
ಅನಂತರದ ದಿನಗಳಲ್ಲಿ ರಸ್ತೆಯ ಬದಿಯಲ್ಲೂ ಬಿರುಕುಗಳು ಕಂಡುಬಂದಿದ್ದು ಕುಸಿಯುವ ಅಪಾಯ ಎದುರಾಗಿದೆ.
ಸೌಪರ್ಣಿಕಾ ನದಿಯ ಸುಮಾರು 20 ಅಡಿ ಆಳದಿಂದಲೇ ಮಣ್ಣು ತುಂಬಿಸಿ ರಸ್ತೆ ಕಾಮಗಾರಿ ನಡೆಸಲಾಗಿದ್ದು ಸೇತುವೆಯಿಂದ ಸುಮಾರು 25 ಮೀ. ವ್ಯಾಪ್ತಿ ವರೆಗೆ ರಸ್ತೆ ಬದಿಯಲ್ಲಿ ತುಂಬಿಸಿರುವ ಮಣ್ಣು ಸೀಳು ಬಿಟ್ಟಿದೆ.
ಲಘು ವಾಹನ ಸವಾರರಲ್ಲಿ ಭೀತಿ ರಾಷ್ಟ್ರೀಯ ಹೆದ್ದಾರಿಯ ಬದಿಯಿಂದಲೇ ಬಿರುಕು ಮೂಡಿರುವುದರಿಂದ ಮಳೆಯು ಹೆಚ್ಚಾದಲ್ಲಿ ಮಣ್ಣು ಜರಿದು ಅಪಾಯ ಎದುರಾಗುವ ಸಾಧ್ಯತೆಗಳಿವೆ, ರಾ.ಹೆ.ಯಲ್ಲಿ ದೊಡ್ಡ ವಾಹನಗಳು ಚಲಿಸುವಾಗ ಇಲ್ಲವೇ ಇನ್ನೊಂದು ವಾಹನವನ್ನು ಹಿಂದಿಕ್ಕುವಾಗ ದ್ವಿಚಕ್ರ ವಾಹನಗಳ ಸವಾರರನ್ನು ರಸ್ತೆಯಿಂದ ಕೆಳಗಿಸಬೇಕಾದ ಅನಿ ವಾರ್ಯ ಎದುರಾಗುತ್ತದೆ. ಈ ಸಂದರ್ಭ ಮಣ್ಣು ಕುಸಿದರೆ ಅವರ ಪ್ರಾಣಕ್ಕೆರವಾಗುವ ಸಾಧ್ಯತೆ ಇದೆ. ರಾತ್ರಿ ಹೊತ್ತಿನಲ್ಲಿ ಸಾಗುವವರಿಗೆ ಅಪಾಯದ ಭೀತಿ ಅಧಿಕವಾಗಿದೆ.
ಮುನ್ನೆಚ್ಚರಿಕೆ ಕ್ರಮ ಅಗತ್ಯ
ಜನಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆಗಳು ಅಗತ್ಯ ಕ್ರಮ ಕೈಗೊಂಡು ಪ್ರಯಾಣಿಕರ ಸುರಕ್ಷೆಗೆ ಮುಂದಾಗಬೇಕು ಎಂದು ಸಾರ್ವ ಜನಿಕರು ಆಗ್ರಹಿಸಿದ್ದಾರೆ.
ಮರವಂತೆಯ ಸೇತುವೆ ಅನಂತರದ ರಸ್ತೆಯ ಬದಿಗೆ ತುಂಬಿಸಿರುವ ಮಣ್ಣು ಬಿರುಕು ಬಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಅ ಧಿಕ ಮಳೆ ಸುರಿದಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಹೆಚ್ಚು. ರಸ್ತೆ ಬದಿಯ ಸುರಕ್ಷೆಗೆ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.
– ನಾಗರಾಜ, ದ್ವಿಚಕ್ರ ವಾಹನ ಸವಾರ