Advertisement

“ಮರಣಗರ್ಭ’ಕಾದಂಬರಿ ಬಿಡುಗಡೆ ಚೈತನ್ಯ ಶ್ರೀ ಪ್ರಶಸ್ತಿ ಪ್ರದಾನ

08:15 AM Jul 29, 2017 | Team Udayavani |

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ಪರ್ಯಾಯ ಶ್ರೀ ಪೇಜಾವರ ಮಠ, ಮಂಗಳೂರು ಕಲ್ಕೂರ ಪ್ರತಿಷ್ಠಾನ ಹಾಗೂ ಕಥಾಬಿಂದು ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಚೈತನ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ ನಡೆಯಿತು. 

Advertisement

ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು  ಪಿ.ವಿ. ಪ್ರದೀಪ್‌ ಕುಮಾರ್‌ ಅವರ ಕಾದಂಬರಿ “ಮರಣಗರ್ಭ’ವನ್ನು  ಬಿಡುಗಡೆಗೊಳಿಸಿ ಅನುಗ್ರಹ ಸಂದೇಶ ನೀಡಿದರು. ಶ್ರೀಪೇಜಾವರ ಕಿರಿಯ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. 

ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್‌ ಕಲ್ಕೂರ, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ದೇರಳಕಟ್ಟೆ ವಿದ್ಯಾರತ್ನ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ರವೀಂದ್ರ ಶೆಟ್ಟಿ , ಪಾಣೆಮಂಗಳೂರಿನ ವೇ|ಮೂ| ಜನಾರ್ದನ ಭಟ್‌ ಅತಿಥಿಗಳಾಗಿದ್ದರು. 

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಧಾ ನಾಗೇಶ್‌, ಕು|ಪ್ರಕೃತಿ, ತಾರಾನಾಥ ಬೋಳಾರ್‌, ಇನ್ನಾ ಉದಯಕುಮಾರ ಶೆಟ್ಟಿ, ಟಿ.ಎಸ್‌.ರಾಘವೇಂದ್ರ ರಾವ್‌, ಹೊನ್ನಯ್ಯ, ಕೆ.ಎಂ.ಉಡುಪ, ಉದಯಕುಮಾರ ಶೆಟ್ಟಿ, ಡಾ|ಜಿ.ಆರ್‌. ಶೆಟ್ಟಿ, ಬಾಲಕೃಷ್ಣ ವೈದ್ಯ, ಜಿ.ಆರ್‌.ಉಪಾಧ್ಯಾಯ ಅವರಿಗೆ “ಚೈತನ್ಯಶ್ರೀ’ ಪ್ರದಾನ ಮಾಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next