Advertisement
ಹಲವು ಮನೆಗಳನ್ನು ಹೊಕ್ಕಿದ್ದರು!ಘಟನೆ 1: ಮನೆಯವರು ಮೈಸೂರಿಗೆ ಮೇ 5ರಂದು ಪ್ರವಾಸಕ್ಕೆ ಹೋಗಿದ್ದರು. ಮೇ 7ರಂದು ಮನೆಗೆ ಬಂದು ನೋಡಿದಾಗ ಮನೆಯಲ್ಲಿದ್ದ 1.60 ಲ.ರೂ. ಮೌಲ್ಯದ ಚಿನ್ನಾಭರಣ ಕಳವಾಗಿತ್ತು.
Related Articles
ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಟಾರದ ಪಿಜಿಯಲ್ಲಿದ್ದವರು ಮೇ 9ರಂದು ಸಂಜೆ ಹೊರಗೆ ಹೋಗಿ ರಾತ್ರಿ 7.20ಕ್ಕೆ ಬಂದು ನೋಡಿದಾಗ ಲ್ಯಾಪ್ಟಾಪ್, ಮೊಬೈಲ್ ಕಳವಾಗಿತ್ತು. ನಗರದ ಕಣ್ಣಿನ ಆಸ್ಪತ್ರೆಯೊಂದಕ್ಕೆ ಮೇ 18ರಂದು ರಾತ್ರಿ 9ಕ್ಕೆ ಅದರ ಆಡಳಿತ ಅಧಿಕಾರಿ ಲಾಕ್ ಮಾಡಿ ಹೋಗಿದ್ದರು. ಮೇ 20ರ ಬೆಳಗ್ಗೆ ಬಂದು ನೋಡಿದಾಗ ಬೀಗ ಒಡೆದು 74,000 ರೂ. ಕಳವು ಮಾಡಲಾಗಿತ್ತು.
Advertisement
ಈ ಹಿಂದಿನ ಇತರ ಪ್ರಕರಣಕುಲಶೇಖರದಲ್ಲಿ ಜ. 11ರಂದು ಮನೆಯವರು ಬೆಳಗ್ಗೆ ಹೊರಗಡೆ ಹೋಗಿ ಅಪರಾಹ್ನ ಮರಳಿ ಬಂದಾಗ ಮನೆಯ ಹೆಂಚುಗಳನ್ನು ತೆಗೆದು ಅಂದಾಜು 3.50 ಲ.ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿತ್ತು. ಡಿ. 19ರಂದು ರಾತ್ರಿ ನಗರದ ಮನೆಯೊಂದರಿಂದ 160 ಗ್ರಾಂ ಚಿನ್ನಾಭರಣ, 6,000 ರೂ. ಕಳವು ಮಾಡಲಾಗಿತ್ತು. ಕದ್ರಿಯ ಬಾಡಿಗೆ ಮನೆಯಲ್ಲಿದ್ದವರು ಮೈಸೂರಿಗೆ ಊರಿಗೆಂದು ತೆರಳಿ ವಾಪಸ್ ಜ. 16ರಂದು ಬಂದು ನೋಡಿದಾಗ ಮನೆಯ ಬಾಗಿಲಿನ ಲಾಕ್ ಮುರಿದು ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿರುವುದು ಗೊತ್ತಾಗಿತ್ತು. ರಾತ್ರಿ ಗಸ್ತು ಕಡಿಮೆಯಾಯಿತೆ?
ಬೀಟ್ ಪೊಲೀಸರಿಂದ ಏರಿಯಾ ಭೇಟಿ, ರಾತ್ರಿ ಗಸ್ತು, ವಾಹನಗಳ ತಪಾಸಣೆ, ಇಂಟರ್ಸೆಪ್ಟರ್, ಹೈವೇ ಪಟ್ರೋಲಿಂಗ್ ಮೂಲಕ ನಿಗಾ ಮೊದಲಾದವು ಕಡಿಮೆಯಾಗಿವೆ ಎಂಬ ದೂರುಗಳು ಕೂಡ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. 20ಕ್ಕೂ ಅಧಿಕ ವಾಹನಗಳ ಕಳವು
ನಗರದ ವಿವಿಧೆಡೆ ಕಳೆದ ಒಂದು ತಿಂಗಳಲ್ಲಿ 20ಕ್ಕೂ ಅಧಿಕ ವಾಹನಗಳು ಕಳವಾಗಿವೆ. ಬಹುತೇಕ ವಾಹನ ಕಳವು ಪ್ರಕರಣಗಳಲ್ಲಿ ವಾಹನ ಸವಾರರ ನಿರ್ಲಕ್ಷ್ಯವೇ ಕಳ್ಳರಿಗೆ ವರದಾನವಾಗಿರುವುದು ಗೊತ್ತಾಗಿದೆ. ಪದೇಪದೆ ದ್ವಿಚಕ್ರ ವಾಹನಗಳ ಕಳವು ನಡೆಯುತ್ತಿದ್ದರೂ ಕಳ್ಳರ ಪತ್ತೆ ಸಾಧ್ಯವಾಗಿಲ್ಲ.