Advertisement

ಮಾನ್ವಿಯಲ್ಲಿ ಪ್ರತ್ಯೇಕ ಅಪಘಾತ; ಬೈಕ್ ಸವಾರ ಯುವಕರಿಬ್ಬರ ದುರ್ಮರಣ

05:15 PM Feb 20, 2022 | Team Udayavani |

ಮಾನ್ವಿ: ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ತಾಲೂಕಿನಲ್ಲಿಭಾನುವಾರ ನಡೆದಿದೆ.

Advertisement

ನೀರಮಾನ್ವಿ ಗ್ರಾಮದ ಹತ್ತಿರ ಸರ್ಕಾರಿ ಬಸ್‌ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಮಿಟ್ಟಿಕ್ಯಾಂಪ್ ನಿವಾಸಿ ಮಲ್ಲಿಕಾರ್ಜುನ(32 ) ಸಾವನ್ನಪ್ಪಿದ್ದಾರೆ.

ಮಾನ್ವಿ ಪಟ್ಟಣದ ಧ್ಯಾನಮಂದಿರ ಹತ್ತಿರ ಸರ್ಕಾರಿ ಬಸ್‌ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಟ್ಟಣದ ಮಣಿಕಂಠ(22) ಸಾವನ್ನಪ್ಪಿದ್ದಾರೆ.

ವಿಜಯಕುಮಾರಗೆ ಗಂಭೀರ ಗಾಯಗಳಾಗಿದ್ದು ರಾಯಚೂರು ರಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪಿ.ಐ.ಮಹದೇವಪ್ಪ ಪಂಚಮುಖಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next