Advertisement

ರಾಯರ ಬೃಂದಾವನ ದರ್ಶನ ಪುನರಾರಂಭ : ಮಂತ್ರಾಲಯದಲ್ಲಿ 52 ದಿನಗಳ ಬಳಿಕ ಅವಕಾಶ

07:41 AM Jun 23, 2021 | Team Udayavani |

ರಾಯಚೂರು: ಕೊರೊನಾದಿಂದಾಗಿ 52 ದಿನಗಳಿಂದ ಸ್ಥಗಿತಗೊಂಡಿದ್ದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ ದರ್ಶನವನ್ನು ಶ್ರೀಮಠದ ಆಡಳಿತ ಮಂಡಳಿ ಪುನರಾರಂಭಿಸಿದೆ.

Advertisement

ಆಂಧ್ರ ಸರಕಾರದ ಮಾರ್ಗ ಸೂಚಿ ಗಳನ್ವಯ ದರ್ಶನಕ್ಕೆ ಅನುವು ಮಾಡಿ ಕೊಡಲಾಗಿದೆ. ಆರೋಗ್ಯ ಇಲಾಖೆ ಮಾರ್ಗ ಸೂಚಿ ಪ್ರಕಾರ ದರ್ಶನಕ್ಕೆ ಅವ ಕಾಶ ಕಲ್ಪಿಸಿದ್ದು, ಮಠದ ಪ್ರಾಕಾರದಲ್ಲಿ ಪ್ರದಕ್ಷಿಣೆಗೆ ಅವಕಾಶ ಇಲ್ಲ. ಭಕ್ತರು ಸಾಮಾಜಿಕ ಅಂತರ ಕಾಯ್ದು ಕೊಂಡು ರಾಯರ ಮೂಲ ಬೃಂದಾವನ ದರ್ಶನ ಪಡೆಯಬಹುದು. ಬೆಳಗ್ಗೆ 6ರಿಂದ ಅಪರಾಹ್ನ 2ರ ವರೆಗೆ, ಸಂಜೆ 4ರಿಂದ ರಾತ್ರಿ 9ರ ವರೆಗೆ ದರ್ಶನಕ್ಕೆ ಅವಕಾಶ ಇದೆ. ಜತೆಗೆ ವಿವಿಧ ಊರುಗಳಿಂದ ಬರುವ ಭಕ್ತರಿಗೆ ಮಠದ ವಸತಿಗೃಹಗಳಲ್ಲಿ ವಾಸ್ತವ್ಯಕ್ಕೂ ಅವಕಾಶ ಕಲ್ಪಿಸಲಾಗಿದೆ.

ರಾಯರ ದರ್ಶನಕ್ಕೆ ಅನನುಕೂಲ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಕಾರಣದಿಂದಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಮೂಲಕ ರಾಯರ ದರ್ಶನ ಪಡೆಯಬೇಕು.
– ಶ್ರೀ ಸುಬುಧೇಂದ್ರತೀರ್ಥರು, ರಾಘವೇಂದ್ರ ಮಠದ ಪೀಠಾಧಿಪತಿ

Advertisement

Udayavani is now on Telegram. Click here to join our channel and stay updated with the latest news.

Next