Advertisement

ಮಂಸೋರೆ ಚಿತ್ರ ನಾತಿಚರಾಮಿ

01:27 PM Jan 15, 2018 | Team Udayavani |

ರಾಷ್ಟ್ರಪ್ರಶಸ್ತಿ ವಿಜೇತ “ಹರಿವು’ ಚಿತ್ರವನ್ನು ನಿರ್ದೇಶಿಸಿದ್ದ ಮಂಸೋರೆ ಹೊಸದೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆ ಚಿತ್ರಕ್ಕೆ ಶ್ರುತಿ ಹರಿಹರನ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ರಂಗಭೂಮಿ ಪ್ರತಿಭೆ ಸಂಪತ್‌ಕುಮಾರ್‌ ಕೂಡ ಪ್ರಧಾನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಆಗ ಮಂಸೋರೆ ನಿರ್ದೇಶನದ ಚಿತ್ರಕ್ಕೆ ಶೀರ್ಷಿಕೆ ಪಕ್ಕಾ ಆಗಿರಲಿಲ್ಲ. ಈಗ ಆ ಚಿತ್ರಕ್ಕೆ ನಿರ್ದೇಶಕರು, “ನಾತಿಚರಾಮಿ’ ಎಂದು ನಾಮಕರಣ ಮಾಡಿದ್ದಾರೆ. “ನಾತಿ ಚರಾಮಿ’ ಅಂದರೆ, ಮದುವೆ ಸಂದರ್ಭದಲ್ಲಿ ಪುರೋಹಿತರಿಂದ ಕೇಳಿಬರುವ ಪ್ರಮುಖ ಪದವಿದು. 

Advertisement

ಈ ಚಿತ್ರವನ್ನು ಜಗನ್ಮೋಹನ್‌ ರೆಡ್ಡಿ ಹಾಗೂ ಶಿವಕುಮಾರ್‌ ರೆಡ್ಡಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಮಂಸೋರೆ ಅವರು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. ಹಾಗಾದರೆ, ಈ ಚಿತ್ರವೂ ಕಲಾತ್ಮಕ ಚಿತ್ರವಾಗಿರುತ್ತಾ ಎಂಬ ಪ್ರಶ್ನೆ ಎದುರಾಗಬಹುದು. ಆದರೆ, ಇಲ್ಲಿರುವ ಚಿತ್ರಕಥೆಯಲ್ಲೊಂದು ಹೊಸ ಪ್ರಯೋಗವಿದೆ. ಬಿಗಿ ನಿರೂಪಣೆಯೊಂದಿಗೇ ಚಿತ್ರ ಸಾಗಲಿದೆ. ಪಕ್ಕಾ ಕಮರ್ಷಿಯಲ್‌ ಸಿನಿಮಾಗಳಲ್ಲಿರುವಂತೆ ಯಾವ ಮಸಾಲೆಯೂ ಇಲ್ಲಿರುವುದಿಲ್ಲ. ಆದರೆ, ಎಲ್ಲಾ ವರ್ಗಕ್ಕೂ ಸಲ್ಲುವಂತಹ ಚಿತ್ರ ಇದಾಗಲಿದೆ ಎಂಬುದು ನಿರ್ದೇಶಕರ ಮಾತು. ಬಿಂದು ಮಾಲಿನಿ ಸಂಗೀತ ನೀಡುತ್ತಿದ್ದಾರೆ. ಗುರುಪ್ರಸಾದ್‌ ನರ್ನಾಡ್‌ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಕಥೆ ಮತ್ತು ಸಂಭಾಷಣೆಯನ್ನು ಎನ್‌. ಸಂಧ್ಯಾರಾಣಿ ಅವರು ಬರೆಯುತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next