Advertisement

ಉಡುಪಿ: ಸಾವನ್ನಪ್ಪಿ ಎಂಟು ತಿಂಗಳ ಬಳಿಕ ವ್ಯಕ್ತಿಯ ಮೃತದೇಹ ಪತ್ತೆ!

02:53 PM Mar 04, 2021 | Team Udayavani |

ಉಡುಪಿ: ಅಲೆವೂರು ಗುಡ್ಡೆಯಂಗಡಿ ಇಲ್ಲಿಯ ಮನೆಯೊಂದರಲ್ಲಿ ಅಸ್ಥಿಪಂಜರವೊಂದು ಗುರುವಾರ ಕಂಡುಬಂದಿದೆ. ಈ ವ್ಯಕ್ತಿ ಮೃತಪಟ್ಟು ಎಂಟು ತಿಂಗಳು ಕಳೆದಿರ ಬಹುದೆಂದು ಶಂಕಿಸಲಾಗಿದೆ.

Advertisement

ಮೃತ ಪಟ್ಟಿರುವ ವ್ಯಕ್ತಿಯನ್ನು ಸುರೇಶ್ ಶೆಟ್ಟಿ (47 ವ) ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಜಾರಕಿಹೊಳಿ ಸಿಡಿ ಪ್ರಕರಣ : ಪ್ರಭಾವಿಗಳ ಕೈವಾಡವಿದೆ ಎಂದ ಶಾಸಕ ರಾಜುಗೌಡ!

ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕಳೇಬರ ಶವಪರೀಕ್ಷೆಗೆ ಮಣಿಪಾಲದ ಶವಗಾರಕ್ಕೆ ಸಾಗಿಸಲು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿದರು.

ಇದನ್ನೂ ಓದಿ: ಗದ್ದೆಗೆ ನುಗ್ಗಿದ ಉಪ್ಪುನೀರು: ನಾಶವಾದ ಮಟ್ಟುಗುಳ್ಳ ಬೆಳೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next