Advertisement

ಮಣೂರು: ಅನಘಾ ಉಡುಪಗೆ ಸಮ್ಮಾನ

10:57 PM May 05, 2019 | Team Udayavani |

ಕೋಟ: ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 3ನೇ ಸ್ಥಾನಿಯಾದ ಕೋಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮಣೂರಿನ ಅನಘಾ ಉಡುಪರನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ದೇಗುಲದ ವಠಾರದಲ್ಲಿ ಇತ್ತೀಚೆಗೆ ಸಮ್ಮಾನಿಸಲಾಯಿತು.

Advertisement

ವಿವೇಕ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶ್ರೀಪತಿ ಹೇಳೆì ಸಮ್ಮಾನ ನೆರವೇರಿಸಿದರು.

ನಿವೃತ್ತ ಉಪನ್ಯಾಸಕ ಅರುಣಾಚಲ ಮಯ್ಯ ಮಾತನಾಡಿ, ಅನಘಾ ಉಡುಪರ ಈ ಸಾಧನೆ ನಮ್ಮೂರಿಗೆ ಹೆಮ್ಮೆ ತಂದಿದೆ. ಹೀಗಾಗಿ ಊರ ವತಿಯಿಂದ ಈ ಗೌರವ ನೆರವೇರಿಸಲಾಗಿದೆ ಎಂದರು.

ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸತೀಶ್‌ ಎಚ್‌. ಕುಂದರ್‌ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಎಂ.ಎನ್‌. ಮಧ್ಯಸ್ಥ, ಉದ್ಯಮಿ ಅಶೋಕ್‌ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next