Advertisement

ಕಾರವಾರ: ಕರಾವಳಿ ಕಾವಲು ಪಡೆಯ ಪಶ್ಚಿಮ ವಲಯದ ಕಮಾಂಡರ್‌ ಆಗಿ ಕಾರವಾರ ಮೂಲದ ಮನೋಜ್‌ ವಸಂತ ಬಾಡ್ಕರ್‌ ಸೋಮವಾರ ಮುಂಬೈನಲ್ಲಿ ಅಧಿಕಾರ ವಹಿಸಿಕೊಂಡರು.

Advertisement

ಮಹಾರಾಷ್ಟ್ರ, ಗೋವಾ, ಕೇರಳ, ಲಕ್ಷದ್ವೀಪ ಮತ್ತು ಕರ್ನಾಟಕ ಒಳಗೊಂಡ ಪಶ್ಚಿಮ ವಲಯದ ಕಮಾಂಡರ್‌ ಆಗಿ ಪದನ್ನೋತಿ ಹೊಂದಿದ್ದಾರೆ.

2018ರಲ್ಲಿ ಇನ್ಸ್‌ಪೆಕ್ಟರ್‌ ಜನರಲ್‌ ಹುದ್ದೆಗೆ ಬಡ್ತಿ ಹೊಂದಿ ನವದೆಹಲಿಯಲ್ಲಿ ಸಿಜಿಎಸ್‌ಬಿ ಚೇರ್ಮನ್‌ ಆಗಿದ್ದರು. ಅದಕ್ಕೂ ಮುನ್ನ 2006ರಿಂದ 2008ರವರೆಗೆ ಕರ್ನಾಟಕ ಮತ್ತು 2013ರಿಂದ 2018ರವರೆಗೆ ಗೋವಾ ಕರಾವಳಿ ಕಾವಲು ಪಡೆ ಮುಖ್ಯಸ್ಥರಾಗಿದ್ದರು.

ಕಾರವಾರದ ಸೇಂಟ್‌ ಜೋಸೆಫ್‌ ಹೈಸ್ಕೂಲ್‌ ಮತ್ತು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಅವರು, ವಸಂತ ಬಾಬುರಾವ್‌ ಬಾಡ್ಕರ್‌ ಮತ್ತು ವಸಂತಿ ವಸಂತ ಬಾಡ್ಕರ್‌ ದಂಪತಿ ಪುತ್ರ.

Advertisement

Udayavani is now on Telegram. Click here to join our channel and stay updated with the latest news.

Next