Advertisement

ಯುವಜನರಿಗೆ ಉದ್ಯೋಗ ನೀಡುವುದು ನನ್ನ ಮೊದಲ ಆದ್ಯತೆ: ಬಾಬು ಆಜಗಾಂವಕರ್

04:47 PM Dec 06, 2021 | Team Udayavani |

ಪಣಜಿ: ಗೋವಾದ 40 ಮತಕ್ಷೇತ್ರಗಳ ಪೈಕಿ ಕೇವಲ ನಾನು ನನ್ನ ಮತಕ್ಷೇತ್ರದಲ್ಲಿ ಮಾತ್ರ ಯುವಕರಿಗೆ ನೌಕರಿ ನೀಡಬಲ್ಲೆ, ಬೇರೆ ಯಾರಿಂದಲೂ ಅದು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಬಾಬು ಆಜಗಾಂವಕರ್ ನುಡಿದರು.

Advertisement

ಪತ್ರಾದೇವಿಯಲ್ಲಿ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿಯ ದೃಷ್ಠಿಕೋನದಿಂದ ನಾನು ಪೆಡ್ನೆಯಲ್ಲಿ ಯಾವ ಯಾವ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇವೋ ಆ ಎಲ್ಲ ಕಾಮಗಾರಿಗಳಲ್ಲಿ ಪೆಡ್ನೆ ಜನರ ಯೋಗದಾನವಿದೆ. ಅವರೆಲ್ಲರ ತ್ಯಾಗದ ಪ್ರತೀಕವಾಗಿ ಅಭಿವೃದ್ಧಿ ಸಾಧ್ಯವಾಗಿದೆ. ಈ ಯೋಜನೆಗಳ ಫಲವಾದ ಈ ಮತಕ್ಷೇತ್ರದ ಯುವಕರಿಗೆ ನೌಕರಿಯ ಲಾಭ ಸಿಗುವಂತಾಗಬೇಕು. ಈ ಹಿನ್ನೆಲೆಯಲ್ಲಿ ನೀವೆಲ್ಲರೂ ಸಂಘಟಿತರಾಗಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನನಗೆ ಬಹುಮತ ನೀಡಿ ಆಯ್ಕೆ ಮಾಡಿ ಎಂದು ಬಾಬು ಆಜಗಾಂವಕರ್ ಮನವಿ ಮಾಡಿದರು.

ನಾನು ನಿಮ್ಮ ಸೇವಕನಾಗಿದ್ದೇನೆ, ನಿಮ್ಮಿಂದಾಗಿ ನಾನು ಶಾಸಕ, ಮಂತ್ರಿ ಉಪಮುಖ್ಯಮಂತ್ರಿಯಾಗಿದ್ದೇನೆ. ನೀವು ಹೇಳಿದ ಅಭಿವೃದ್ಧಿ ಕಾಮಗಾರಿಯನ್ನು ನಾನು ಪೂರ್ಣಗೊಳಿಸಿದ್ದೇನೆ. ನಾನು ಯಾವ ಕೆಲಸ ಮಾಡಿಲ್ಲ ಅಥವಾ ಯಾವ ಕೆಲಸದಲ್ಲಿ ಕೊರತೆಯಾಗಿದೆ ಎಂಬುದನ್ನು ನೀವು ತಿಳಿಸಬೇಕು ಎಂದು ಬಾಬು ಆಜಗಾಂವಕರ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಉತ್ತಮವೀರ್, ಮಾಜಿ ಅಧ್ಯಕ್ಷ ಸೂರ್ಯಕಾಂತ ತೋರಸ್ಕರ್, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next