Advertisement

ಕಿಡ್ನ್ಯಾಪ್‌ ಆಗಿದ್ದ ಮಂಜೇಶ್ವರದ ವಿದ್ಯಾರ್ಥಿ ಮಂಗಳೂರಿನಲ್ಲಿ ಪತ್ತೆ

08:27 AM Jul 26, 2019 | Team Udayavani |

ಮಂಜೇಶ್ವರ: ಸೋಮವಾರ ಅಪಹರಣವಾಗಿದ್ದ ಕಳಿಯೂರು ಪದವಿನ ಅಬ್ದುಲ್‌ ರೆಹಮಾನ್‌ ಹ್ಯಾರಿಸ್‌ ಎಂಬ ವಿದ್ಯಾರ್ಥಿ ಗುರುವಾರ ಮಂಗಳೂರು ಬಸ್ಸು ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ.

Advertisement

ಅಪಹರಣಕಾರರು ವಿದ್ಯಾರ್ಥಿ ಹ್ಯಾರಿಸ್‌ ನನ್ನು ಮಂಗಳೂರು ಬಸ್ಸು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ವರದಿಯಾಗಿದೆ.

ಕಳಿಯೂರು ಪದವು ನಿವಾಸಿ ಹಸನ್‌ ಕುಂಙರವರ ಪುತ್ರ ಅಬ್ದುಲ್‌ ರೆಹಮಾನ್‌ ಹ್ಯಾರಿಸ್‌ (17) ಜುಲೈ 22ರಂದು ತನ್ನ ಸಹೋದರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಅಪಹರಣ ಮಾಡಲಾಗಿತ್ತು. ಕೊಳಿಯೂರು ಪದವಿನಲ್ಲಿ ಅಡಿಟೋರಿಯಂ ಬಳಿ ಕಾರಿನಲ್ಲಿ ಬಂದಿದ್ದ ಅಪಹರಣಕಾರರು ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಹ್ಯಾರಿಸ್‌ ನನ್ನು ಅಪಹರಣ ಮಾಡಿದ್ದರು. ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next