Advertisement

ಕರ್ನಾಟಕ ರಣಜಿ ತಂಡಕ್ಕೆ ಮನೀಷ್‌ ಪಾಂಡೆ ನಾಯಕ

11:00 PM Feb 09, 2022 | Team Udayavani |

ಬೆಂಗಳೂರು: ಪ್ರತಿಷ್ಠಿತ ದೇಶಿ ಕ್ರಿಕೆಟ್‌ ಕೂಟವಾದ ರಣಜಿ ಟೂರ್ನಿಗಾಗಿ ಕರ್ನಾಟಕ 20 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಬಾರಿ ಕೂಡ ಅನುಭವಿ ಆಟಗಾರ ಮನೀಷ್‌ ಪಾಂಡೆ ತಂಡವನ್ನು ಮುನ್ನಡೆಸಲಿದ್ದಾರೆ. ಉಪನಾಯಕನಾಗಿ ರವಿಕುಮಾರ್‌ ಸಮರ್ಥ್ ಆಯ್ಕೆಯಾಗಿದ್ದಾರೆ.

Advertisement

ಸ್ಟಾರ್‌ ಆಟಗಾರರಾದ ಮಾಯಾಂಕ್‌ ಅಗರ್ವಾಲ್‌, ಕರುಣ್‌ ನಾಯರ್‌, ದೇವದತ್ತ ಪಡಿಕ್ಕಲ್‌, ಶ್ರೇಯಸ್‌ ಗೋಪಾಲ್‌ ಮತ್ತು ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ.

ಈ ಬಾರಿ ಕರ್ನಾಟಕ ತಂಡವು ಎಲೈಟ್‌ “ಸಿ’ ಗುಂಪಿನಲ್ಲಿದ್ದು, ಪುದುಚೇರಿ, ರೈಲ್ವೇ ಮತ್ತು ಜಮ್ಮು-ಕಾಶ್ಮೀರ ತಂಡಗಳ ವಿರುದ್ದ ಆಡಲಿದೆ. ಈ ಎಲ್ಲ ಪಂದ್ಯಗಳು ಚೆನ್ನೈಯಲ್ಲಿ ನಡೆಯಿದೆ.

ಇದನ್ನೂ ಓದಿ:ಬೌಲರ್‌ಗಳ ತಿರುಗೇಟು; ಭಾರತಕ್ಕೆ ಏಕದಿನ ಸರಣಿ

ಕರ್ನಾಟಕ ರಣಜಿ ತಂಡ
ಮನೀಷ್‌ ಪಾಂಡೆ (ನಾಯಕ), ರವಿ ಕುಮಾರ್‌ ಸಮರ್ಥ್ (ಉಪನಾಯಕ), ಮಾಯಾಂಕ್‌ ಅಗರ್ವಾಲ್‌, ಕರುಣ್‌ ನಾಯರ್‌, ದೇವದತ್ತ ಪಡಿಕ್ಕಲ್‌, ಸಿದ್ಧಾರ್ಥ್ ಕೆ.ವಿ., ನಿಶ್ಚಲ್‌ ಡಿ., ಅನೀಶ್ವರ್‌ ಗೌತಮ್‌, ಶುಭಾಂಗ್‌ ಹೆಗ್ಡೆ, ಕೆ. ಗೌತಮ್ , ಶ್ರೇಯಸ್‌ ಗೋಪಾಲ್‌, ಜಗದೀಶ್‌ ಸುಚಿತ್‌, ಕೆ.ಸಿ. ಕಾರ್ಯಪ್ಪ, ಶರತ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌), ಶರತ್‌ ಬಿ.ಆರ್‌., ಪ್ರಸಿದ್ಧ್ ಕೃಷ್ಣ, ರೋನಿತ್‌ ಮೋರೆ, ವೆಂಕಟೇಶ್‌ ಎಂ., ವೈಶಾಕ್‌ ವಿ., ವಿದ್ಯಾಧರ್‌ ಪಾಟೀಲ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next