Advertisement

Manipur ವೀಡಿಯೋ ಹಂಚಿಕೊಂಡ ರಾಹುಲ್‌: ಮೋದಿ ಭೇಟಿಗೆ ಆಗ್ರಹ

01:16 AM Jul 12, 2024 | Team Udayavani |

ಹೊಸದಿಲ್ಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಇತ್ತೀಚೆಗೆ ತಾವು ಮಣಿಪುರಕ್ಕೆ ಭೇಟಿ ನೀಡಿದ್ದ ಸಂದರ್ಭದ ವೀಡಿಯೋವನ್ನು ಜಾಲತಾಣದಲ್ಲಿಹಂಚಿ ಕೊಂಡಿದ್ದಾರೆ. ಅಲ್ಲದೇ ಮಣಿ ಪುರ ಸಂತ್ರಸ್ತರಿಗೆ ಖುದ್ದು ಪ್ರಧಾನಿಯೇ ಬಂದು ಸಾಂತ್ವನ ಹೇಳಬೇಕೆಂದು ಮನವಿ ಮಾಡಿದ್ದಾರೆ. ಸಂತ್ರಸ್ತರ ಶಿಬಿರಗಳಿಗೆ ರಾಹುಲ್‌ ಭೇಟಿ ನೀಡಿರುವುದು ವೀಡಿಯೋದಲ್ಲಿದೆ. ಈ ವೇಳೆ ಹಲವು ಮಹಿಳೆಯರು ತಮ್ಮ ಸಂಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಅವರಿಗೆ ಸಾಂತ್ವನ ಹೇಳಿರುವ ರಾಹುಲ್‌, “ಸರಕಾರ ಮನಸ್ಸು ಮಾಡಿದರೆ ಈ ಸಮಸ್ಯೆ ಬಗೆಹರಿಸಬಹುದು. ಸಂಸತ್‌ನಲ್ಲಿ ನಿಮ್ಮ ಪರ ನಾವು ಧ್ವನಿಯೆತ್ತುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next